ಪ್ರಶಸ್ತಿ ಪುರಸ್ಕ್ರತ ಪತ್ರಕರ್ತ ಮಲ್ಲಿಕಾರ್ಜುನ ಪಟ್ಟಣಶೆಟ್ಟಿಗೆ ಸನ್ಮಾನ

ಪ್ರಶಸ್ತಿ ಪುರಸ್ಕ್ರತ ಪತ್ರಕರ್ತ ಮಲ್ಲಿಕಾರ್ಜುನ ಪಟ್ಟಣಶೆಟ್ಟಿಗೆ ಸನ್ಮಾನ  Tribute to award winning journalist Mallikarjuna Pattanashetty

ಪ್ರಶಸ್ತಿ ಪುರಸ್ಕ್ರತ ಪತ್ರಕರ್ತ ಮಲ್ಲಿಕಾರ್ಜುನ ಪಟ್ಟಣಶೆಟ್ಟಿಗೆ ಸನ್ಮಾನ  

ದೇವರಹಿಪ್ಪರಗಿ 13: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಪುರಸ್ಕೃತ ತಾಲೂಕು ವರದಿಗಾರ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರಿಗೆ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಗಮೇಶ ಉತ್ನಾಳ ಅವರ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರದಂದು ಹಮ್ಮಿಕೊಂಡಿದ್ದ ಸಂಘದ ಪದಾಧಿಕಾರಿಗಳು, ಪತ್ರಕರ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಂದ ಅತ್ಮೀಯ ವಾಗಿ ಸನ್ಮಾನಿಸಿ, ಗೌರವಿಸಲಾಯಿತು.  

ಕಾ.ನಿ.ಪ. ತಾಲೂಕ ಉಪಾಧ್ಯಕ್ಷ ಮಹಮ್ಮದ ರಫೀಕ್ ಮೋಮಿನ್, ಹಿರಿಯ ಪತ್ರಕರ್ತರಾದ ಶ್ರೀಧರ ನಾಡಗೌಡ, ಹುಸೇನ ಕೊಕಟನೂರ, ಹಸನಸಾಬ ನದಾಫ, ಅಶೋಕ ಗೊಲ್ಲರ, ಮಲ್ಲಿಕಾರ್ಜುನ ಕಬ್ಬಿನ, ಹಮೀದ ಮುಲ್ಲಾ, ಮಹಮದ್ ರಫೀಕ್ ಪತ್ತೆ ಅಹ್ಮದ್, ಸಿದ್ದು ಕಾಟಕರ, ಕನ್ನಡಪರ ಸಂಘಟನೆ ಮುಖಂಡರಾದ ರಹಿಮಾನ ಸಾಬ ಕನಕಾಲ, ಅಯ್ಯಪ್ಪ ಸಾತಿಹಾಳ, ಶಿವಯ್ಯ ವಸ್ತ್ರದ ಸೇರಿದಂತೆ ಮುಖಂಡರು ಹಾಗೂ ತಾಲೂಕಿನ ಪತ್ರಕರ್ತರು ಪಾಲ್ಗೊಂಡಿದ್ದರು.