ಡಾ. ಡಿ.ವೈ.ಉಪ್ಪಾರರಿಗೆ ಶ್ರದ್ಧಾಂಜಲಿ
Tribute to Dr. D.Y. Uppara
ಸಿಂದಗಿ 22: ಡಾ. ಡಿ.ವೈ.ಉಪ್ಪಾರ ಅವರು ಒಬ್ಬ ಕಡುಬಡವ ಕೂಲಿ ಕುಟುಂಬದಲ್ಲಿ ಹುಟ್ಟಿದರು ಸಹ ಜನಿಸಿ ಶ್ರೀಮಂತಿಕೆ ಬಂದರು ಕೂಡಾ ಅಹಮತೆ ತೊರದೆ ಬಡಜನರ ಜನರ ಅನೇಕ ಕಷ್ಠಕ್ಕೆ ಸಹಕಾರಿಯಾಗಿದ್ದರು ಅವರ ಅಗಲಿಕೆ ಸಮಾಜ ಸೇವಾ ಕಾರ್ಯಕ್ಕೆ ಕಡಿವಾಣ ಬಿದ್ದಂತಾಗಿದೆ. ಆ ಕುಟುಂಬಕ್ಕೆ ದುಖ: ಭರಿಸುವ ಶಕ್ತಿ ದಯಪಾಲಿಸಲಿ ಎಂದು ಕುಂಟೋಜಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು. ತಾಲೂಕಿ ಯಂಕಂಚಿ ಗ್ರಾಮದ ಕನಕದಾಸ ವೃತ್ತದಲ್ಲಿ ಡಾ. ಡಿ.ವೈ.ಉಪ್ಪಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅದ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿ, ದೃಢವಾದ ಮೌಲ್ಯಗಳು, ಪ್ರಾಮಾನಿಕ ಮತ್ತು ದೂರದರಷ್ಠಿಯ ವ್ಯಕ್ತಿಯಾಗಿದ್ದ ಡಾ. ಡಿ.ವೈ.ಉಪ್ಪಾರ ಅವರು, ಗುತ್ತಿಗೆದಾರರ ಆಶಾಕಿರಣವಾಗಿದ್ದರು. ಅನೇಕ ಬಡಕುಟುಂಬಗಳನ್ನು ಮೇಲ್ತಲು ಉಪ್ಪಾರ ಸಮೂಹ ಸಂಸ್ಥೆಯನನು ಪ್ರಾರಂಭಿಸಿ ಅನೇಕ ಕುಟುಂಬಗಳಿಗೆ ದಾರೀದೀಪವಾಗಿದ್ದು ಇಂತವರು ಅಗಲಿದ್ದು ಬಡಜನರ ಸೇವಾ ಕಾರ್ಯ ನಿಂತು ಹೋದಂತಗಿದೆ ಎಂದರು. ಈ ವೇಳೆ ಚೇತನಗೌಡ ಪಾಟೀಲ, ಎಸ್.ಕೆ.ಕೊಪ್ಪಳ, ಕುಲಕರ್ಣಿ, ಸುರೇಶ ಮಳಲಿ, ಮಲಕಪ್ಪ ಗಬಸಾವಳಗಿ ಮತ್ತು ಗುತ್ತಿಗೆದಾರರು ಸೇರಿದಂತೆ ಅನೇಕರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 