ಅರುಣ ಐಹೊಳೆಗೆ ಸನ್ಮಾನ

ಅರುಣ ಐಹೊಳೆಗೆ ಸನ್ಮಾನ Tribute to Aruna Aihole


ರಾಯಬಾಗ 13: ಚಿತ್ರದುರ್ಗದ ಶ್ರೀ ಶಿವಶರಣ ಮಾದಾರ ಚೆನ್ನಯ್ಯ ಸೇವಾ ಸಮಿತಿ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಚಿತ್ರದುರ್ಗದ ಶ್ರೀ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠಕ್ಕೆ ಶುಕ್ರವಾರ ಭೇಟಿಯಾದ ರಾಜ್ಯ ಉಪಾಧ್ಯಕ್ಷ ಅರುಣ ಐಹೊಳೆ ಅವರನ್ನು ಪೀಠಾಧ್ಯಕ್ಷ ಡಾ.ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಜೀಯವರು ಸತ್ಕರಿಸಿ, ಆಶೀರ್ವಾದಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠ ಪೀಠಾಧ್ಯಕ್ಷ ಡಾ.ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಜೀಯವರು, ಅರುಣ ಐಹೊಳೆ ಅವರು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಹಾಗೂ ರಾಜ್ಯದ ತುಂಬಾ ಸಂಚರಿಸಿ ಸರ್ವ ಸಮಾಜದ ಮುಖಾಂತರ ಕೆಲಸ ಕಾರ್ಯಗಳನ್ನು ಮಾಡಿ ಕೀರ್ತಿ ಸಂಪಾದಿಸಬೇಕು ಎಂದು ಆಶೀರ್ವಾಚನ ಮಾಡಿದರು. ಅರುಣ ಐಹೊಳೆ ಅವರು ಮಾತನಾಡಿ, ತಮಗೆ ನೀಡಿದ ಜವಾಬ್ದಾರಿಯನ್ನು ವಹಿಸಿಕೊಂಡು, ಎಲ್ಲ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ, ಶ್ರೀಗಳ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಎಂದು ನುಡಿದರು.   

ವಿವೇಕಾನಂದ ಯಮಕನಮರಡಿ, ಶ್ರೀಮಂತ ಕಾಂಬಳೆ, ಸುಭಾಸ್ ಮಲ್ಲಪ್ಪಗೊಳ, ದಯಾನಂದ ಬಂಬಲಾಡಿ, ಭರಮಪ್ಪ ಪೂಜಾರ, ಸಂಜೀವ ಮೈಶಾಳೆ, ಪ್ರಕಾಶ ತೇರದಾಳೆ, ಅಪ್ಪಾಸಾಬ ಕೆಂಗನ್ನವರ, ಸಂಗನಗೌಡ ಐಹೊಳೆ, ರಿತೇಶ್ ಅವಳೆ, ಮಾರುತಿ ಮಾಂಗ, ಅಜಿತ ಮಾಂಗ, ನೀಲಪ್ಪ ಐಹೊಳೆ ಸೇರಿ ಸಮಾಜದ ಮುಖಂಡರು ಇದ್ದರು. 


Society Development Blessings and Wishes Arun Aihole's Responsibilities Leadership and Service