ಲೋಕದರ್ಶನ ವರದಿ
ಇಂದು ಸದ್ಗುರು ನಿರುಪಾಧೀಶ್ವರರ ಜಾತ್ರಾ ಮಹೋತ್ಸವ
ಬೆಳಗಾವಿ 19: ಗೋಕಾಕ ತಾಲೂಕಿನ ಕೈತನಾಳ ಗ್ರಾಮದ ಪುಣ್ಯ ಕ್ಷೇತ್ರ ಸದ್ಗುರು ನಿರುಪಾಧೀಶ್ವರ ಜಾತ್ರಾ ಮಹೋತ್ಸವ ಜರುಗಲಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದಿ. 20ರಂದು ಸದ್ಗುರು ನಿರುಪಾಧೀಶ್ವರ ಕರ್ತೃ ಗದ್ದುಗೆಗೆ ಅಭಿಷೇಕ ಅಯ್ಯಾಚಾರ ಶಿವ ಭಜನೆ ಸಪ್ತಾಹ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಲಿವೆ.
ಎರಡನೇ ದಿವಸ 21ರಂದು ಸದ್ಗುರು ನಿರುಪಾಧೀಶ್ವರ ಮಾನವ ಧರ್ಮ ವೇದಿಕೆಯಲ್ಲಿ ನಾಡಿನ ಹರ ಗುರು ಚರಮೂರ್ತಿಗಳ ಆಶೀರ್ವಚನ ಹಾಗೂ ಸಾಮೂಹಿಕ ವಿವಾಹ ಮತ್ತು ವೀರಭದ್ರ ಮಹಾಸ್ವಾಮಿಜೀಗಳವರಿಗೆ ಭಕ್ತರಿಂದ ತುಲಾಭಾರ ಸೇವೆ, ಸೇರಿದಂತೆ ವೇದಿಕೆಯ ಮೇಲೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಅದೇ ದಿನ ಸಾಯಂಕಾಲ ಸದ್ಗುರು ನಿರುಪಾಧೀಶ್ವರರ ರಥೋತ್ಸವು ಸಕಲ ವಾದ್ಯ ವೈಭವಗಳೊಂದಿಗೆ ಹರ ಗುರು ಚರ ಮೂರ್ತಿಗಳ ಸಮ್ಮುಖದಲ್ಲಿ ಜರುಗಲಿದ್ದು, ಸರ್ವ ಸದ್ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಸದ್ಗರುವಿನ ಆಶೀರ್ವಾದ ಮತ್ತು ಪ್ರಸಾದವನ್ನು ಸ್ವೀಕರಿಸಿ ಸದ್ಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.