ಇಂದು ಛಲವಾದಿ ಸಮುದಾಯದ ಚಿಂತನ ಮಂಥನ ಸಭೆ
Today is the brainstorming meeting of the Chalavadi community.
ಹುಕ್ಕೇರಿ 13: ಚಿಕ್ಕೋಡಿಯಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಛಲವಾದಿ ಮಹಾಸಭೆ ಛಲವಾದಿ ಸಮುದಾಯ ಸಮಸ್ಯೆ ಮತ್ತು ಸವಾಲುಗಳ ಕುರಿತು ಚರ್ಚಿಸುವ ಉದ್ದೇಶದಿಂದ 14ರಂದು ಚಿಕ್ಕೋಡಿಯ ಡಾ. ಅರವಿಂದ್ ಘಟ್ಟಿ ತೋಟದ ಸಭಾಂಗಣದಲ್ಲಿ ಚಿಂತನ ಮಂಥನ ಸಭೆ ಆಯೋಜಿಸಲಾಗಿದೆ. ಮಹಾವೀರ್ ಮೋಹತೆ, ಶ್ಯಾಮ ರವಡೆ, ಡಾಕ್ಟರ್ ಅರವಿಂದ್ ಘಟ್ಟಿ, ಸೋಮಶೇಖರ್ ಬಣ್ಣದಮನೆ ಹಾಗೂ ಮಲ್ಲಿಕಾರ್ಜುನ ರಾಸಿಂಗೆ, ಮಲ್ಲೇಶ್ ಚೌಗಲೆ ಇವರ ನೇತೃತ್ವದಲ್ಲಿ ಜರುಗಲಿದೆ ಎಂದು ಸುರೇಶ್ ತಳವಾರ್ ಅವರು ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹುಕ್ಕೇರಿ ತಾಲೂಕಿನ ಸಮಸ್ತ ಛಲವಾದಿ ಸಮಾಜದ ಎಲ್ಲ ಮುಖಂಡರು ಯುವಕರು ಕಾರ್ಯಕ್ರಮಕ್ಕೆ ಭಾಗವಹಿಸಿ ಯಶಸ್ವಿಗೊಳಿಸಬೇಕು. ಕಾರ್ಯಕ್ರಮವು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಉದ್ಘಾಟಿಸುವರು. ಸಭೆಯಲ್ಲಿ ಶಾಸಕ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ, ಶಾಸಕರಾದ ಕೆ. ಆರ್. ಕೃಷ್ಣಮೂರ್ತಿ ಹಾಗೂ ಮಹೇಂದ್ರ ತಮ್ಮನವರ್, ವಿಧಾನ ಪರಿಷತ್ ಸದಸ್ಯ ನೆಹರು ಓಲೆಕಾರ್, ಕೆ ಶಿವಕುಮಾರ್, ಎಫ್.ಎಚ್ ಜಕ್ಕಪ್ಪನವರ್, ಮಾಜಿ ಶಾಸಕ ಶ್ಯಾಮ್ ಘಾಟಿಗೆ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಶ್ರೀಕಾಂತ ತಳವಾರ, ಶಂಕರ ತಿಪ್ಪನಾಯಿಕ, ಮಾರುತಿ ತಳವಾರ, ಶಿವು ಕಣಗಲಿ, ಮುತ್ತು ಕಾಂಬಳೆ, ಅಪ್ಪಣ್ಣ ಖಾತೇದಾರ, ವಿನೋದ ಮಾಳಗೆ, ಮಂಜು ಕಾಮತ್, ಬಾಳು ಘಸ್ತಿ, ಕೆಂಪಣ್ಣ ಕೆಂಪರಾಯಗೋಳ, ಪುನೀತ್ ಮಾಳಗೆ, ರವಿ ಖಾತೇದಾರ, ಕಿರಣ ಕೋಳಿ, ವಿಶಾಲ ಜಯಕರ, ಶಿವಾನಂದ ಕಾಂಬಳೆ, ಅಮರ ಶಿಂಗೆ, ಛಲವಾದಿ ಸಮುದಾಯದ ಮುಖಂಡರು ಗಣ್ಯಮಾನ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 