ಸೈನಿಕರ ಸ್ಟೈರ್ಯ ಹೆಚ್ಚಿಸಲು ಮುಂಡಗೋಡದಲ್ಲಿ ತಿರಂಗಯಾತ್ರೆ

Tiranga Yatra in Mundagoda to boost the morale of soldiers

ಸೈನಿಕರ ಸ್ಟೈರ್ಯ ಹೆಚ್ಚಿಸಲು ಮುಂಡಗೋಡದಲ್ಲಿ ತಿರಂಗಯಾತ್ರೆ  

  ಮುಂಡಗೋಡ 25 : ಭಾರತದ ಸೈನಿಕರ ಪಾಕಿಸ್ತಾನದ ವಿರುದ್ಧ ನಡೆಸಿದ ಆಪರೇಷನ್ ಸಿಂಧೂರ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ನಮ್ಮ ಸೈನಿಕರಿಗೆ ಆತ್ಮಸ್ಥೈರ್ಯ ಹೆಚ್ಚಿಸಲು ಗೌರವ್ ಸಲ್ಲಿಸಲು ಉದ್ದೇಶದಿಂದ ಪಟ್ಟಣದಲ್ಲಿ ಮಾಜಿ ಸೈನಿಕರ ಸಂಘದ  ನೇತೃತ್ವದಲ್ಲಿ ತಿರಂಗಾ ಹಿಡಿದು 300,ಕ್ಕೂ ಹೆಚ್ಚು ಜನರು ತಿರಂಗಾ ಯಾತ್ರೆಯನ್ನು ಶನಿವಾರ ನಡೆಸಿದರು. ಪಟ್ಟಣದ ಹಳೂರಿನ ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ಚಾಲನೆ ನೀಡಿದ ನಂತರ ತಿರಂಗಾಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತ್ತು. ಭಾರತ ಮಾತಾ ಕೀ ಜೈ, ಹಾಗೂ ಸೈನಿಕರ ಪರ ಜಯಘೋಷಗಳನ್ನು ಕೂಗಿ ದೇಶಪ್ರೇಮ ಮೆರೆದರು. ತಿರಂಗಾಯಾತ್ರೆಯಲ್ಲಿ ಸೈನಿಕರು, ಮಾಜಿ ಸೈನಿಕರು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ದೇಶಭಕ್ತ ನಾಗರಿಕರು ಉತ್ಸಾಹದಿಂದ ಯಾತ್ರೆಯಲ್ಲಿ ಪಾಲ್ಗೊಂಡರು.