ವಿಕಲಚೇತನರಲ್ಲಿ ವಿಶಿಷ್ಟವಾದ ಶಕ್ತಿ ಅಡಗಿದೆ: ನಾಗರಾಜ ಜುಮ್ಮಣ್ಣನ್ನವರ

There is a unique power hidden in the disabled: Nagaraja Jummannavara

ವಿಕಲಚೇತನರಲ್ಲಿ ವಿಶಿಷ್ಟವಾದ ಶಕ್ತಿ ಅಡಗಿದೆ: ನಾಗರಾಜ ಜುಮ್ಮಣ್ಣನ್ನವರ 

ಕೊಪ್ಪಳ 06: ವಿಕಲಚೇತನರಲ್ಲಿ ವಿಶಿಷ್ಟವಾದ ಶಕ್ತಿ ಅಡಗಿದೆ ಎಂದು ಸರಕಾರಿ ನೌಕರರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷರಾದ ನಾಗರಾಜ.ಆರ್‌.ಜುಮ್ಮಣ್ಣನ್ನವರ ಹೇಳಿದರು. 

ಅವರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನ ನೌಕರರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿಕಲಚೇತನರಲ್ಲಿ ವಿಶಿಷ್ಟವಾದ ಶಕ್ತಿಗಳು ಅವರ ಅಂಗವೈಕ್ಯಲತೆಗೆ ಅನುಗುಣವಾಗಿ ಇರುತ್ತವೆ.ಅವರ ಅಂಗವೈಕಲ್ಯತೆಗೆ ಅನುಗುಣವಾದ ಕ್ರೀಡೆಗಳನ್ನು ಸೇರಿದಂತೆ ವಿವಿಧ ಸ್ಪರ್ದೇಯನ್ನು ಆಯೋಜನೆ ಮಾಡುವ ಕಾರ್ಯ ಮಾಡಬೇಕಿದೆ. 

ವಿಶೇಷ ಚೇತನ ನೌಕರರು ನಾವು ಆಡುತ್ತೇವೆ ಅಂತ ಇಚ್ಛೆ ತೋರಿದಾಗ, ಅವಕಾಶ ಕಲ್ಪಿಸುತ್ತಾ ಬಂದಿದೆ. ಇದು ಆರನೇ ವರ್ಷ ಕೊಪ್ಪಳ ಜಿಲ್ಲೆಯಲ್ಲಿ ವಿಶೇಷ ಚೇತನ ನೌಕರರಿಗೆ ಪ್ರತ್ಯೇಕವಾಗಿ ಕ್ರೀಡಾಕೂಟ ಏರಿ​‍್ಡಸಿದ್ದು ಕಫನಆಢೆಞಢ ಜಿಲ್ಲೆಯೇ ಮೊದಲು. ಅವರ ಮನವಿಯಂತೆ ಮುಂಬರುವ ದಿನಗಳಲ್ಲಿ ರಾಜ್ಯಮಟ್ಟದಲ್ಲೂ ವಿಶೇಷ ಚೇತನ ನೌಕರರ ಕ್ರೀಡಾಕೂಟ ಏರಿ​‍್ಡಸಲಾಗುವುದು ಎಂದರು.   

ಅಧ್ಯಕ್ಷತೆ ವಹಿಸಿದ್ದ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ಮಾತನಾಡಿ ಯಾವುದೇ ರೀತಿಯ ಕ್ರೀಡೆಗಳನ್ನು ಆಯೋಜನೆ ಮಾಡಿದರೆ ಇಲಾಖೆ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಹಾಗೂ ಉತ್ತಮ ಪ್ರತಿಭೆಗಳನ್ನು ಗುರುತಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು, ವಿಶೇಷವಾಗಿ ವಿಶೇಷ ಚೇತನ ಕ್ರೀಡಾಕೂಟವನ್ನು ಆಯೋಜಿಸಿಅವರಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಕಾರ್ಯ ಮಾದರಿಯಾಗಿದೆ ಎಂದು ಹೇಳಿದರು.   

     ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರ​‍್ಪ ಅಂಡಗಿ ಪ್ರಸ್ತಾವಿಕವಾಗಿ ಮಾತನಾಡುತ್ತಾ,2012 ರಿಂದ ವಿಶೇಷ ಚೇತನ ನೌಕರರ ಸಂಘದಿಂದ ವಿಶೇಷ ಚೇತನ ನೌಕರಿಗಾಗಿ ಪ್ರತ್ಯೇಕವಾದ ಕ್ರೀಡಾಕೂಟವನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಆಯೋಜನೆ ಮಾಡಲಾಗಿತ್ತು. ನಮ್ಮ ಕೊಪ್ಪಳ ಅನುಸರಿಸಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲೂ ಪ್ರತ್ಯೇಕ ಕ್ರೀಡಾಕೂಟಗಳನ್ನು ಆಯೋಜಿಸುತ್ತಿದ್ದಾರೆ. ಆದರೆ ಉಳಿದ ಜಿಲ್ಲೆಯ ವಿಕಲ ಚೇತನ ನೌಕರರು ಕ್ರೀಡಾಕೂಟದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೇ ಕೇವಲ ಈ ಕ್ರೀಡೆ ಜಿಲ್ಲಾ ಮಟ್ಟಕ್ಕೆ ಮಾತ್ರ ಸೀಮಿತವಾಗಿದ್ದು, ಮುಂದಿನ ದಿನಗಳಲ್ಲೂ ರಾಜ್ಯ ಮಟ್ಟದಲ್ಲೂ ಪ್ರತ್ಯೇಕವಾಗಿ ವಿಕಲ ಚೇತನ ನೌಕರಿಗಾಗಿ  ಕ್ರೀಡಾಕೂಟ ಆಯೋಜನೆ ಮಾಡಲು ಮನವಿ ಮಾಡಿದರು.  

       ಈ ಸಂದರ್ಭದಲ್ಲಿ ಜಿಲ್ಲಾ ಖಚಾಂಚಿ ಜಯತೀರ್ತ ದೇಸಾಯಿ, ರಾಜ್ಯ ಪರಿಷತ್ ಸದಸ್ಯ ಆಸೀಫ್ ಅಲಿ, ಜಂಟಿ ಕಾರ್ಯದರ್ಶಿ ನಾಗರಾಜ ಕುಷ್ಟಗಿ, ಕನಕಗಿರಿ ತಾಲೂಕ ಅಧ್ಯಕ್ಷೆ ಶಂಶಾದ ಬೇಗಂ, ಕಾರಟಗಿ ತಾಲೂಕ ಅಧ್ಯಕ್ಷ ಹನುಮಂತಪ್ಪ ನಾಯಕ, ವಿಕಲ ಚೇತನ ಜಿಲ್ಲಾಧ್ಯಕ್ಷ ಅಂದಪ್ಪ ಬೋಳರೆಡ್ಡಿ, ತಾಲೂಕ ಅಧ್ಯಕ್ಷ ಅಂದಪ್ಪ ಇದ್ಲಿ, ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಾಳಪ್ಪ ಕಾಳೆ, ಪ್ರಚಾರ ಸಮುತಿ ಸಂಚಾಲಕ ನಾಗರಾಜನಾಯಕ ಡೊಳ್ಳಿನ, ರಾಜ್ಯ ಕ್ರೀಡಾ ಕಾರ್ಯದರ್ಶಿ ಮಂಜುನಾಥ ಆರೆಂಟನೂರು ,ಪತ್ತಿನ ಸಂಘದ ಸದಸ್ಯರಾದ ಮಲ್ಲಪ್ಪ ಗುಡದಣ್ಣವರ, ನಫೀಜಖಾನ ಪಠಾಣ ಮುಂತಾದವರು ಹಾಜರಿದ್ದರು.