ಸಾಮಾಜಿಕ ನಾಟಕಗಳಿಂದ ರಂಗ ಕಲೆ ಜೀವಂತ: ಸಜ್ಜನರ
ಲೋಕದರ್ಶನ ವರದಿ
ಹಾವೇರಿ02: ಗ್ರಾಮೀಣ ಭಾಗದಲ್ಲಿ ನಡೆಯುವ ಸಾಮಾಜಿಕ ನಾಟಕಗಳಿಂದ ರಂಗ ಕಲೆ ಜೀವಂತವಾಗಿದೆ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಹೇಳಿದರು.
ತಾಲೂಕಿನ ದೇವಗಿರಿ ಗ್ರಾಮದ ಬನಶಂಕರಿ ದೇವಿ ಕಾತರ್ಿಕೋತ್ಸವ ನಿಮಿತ್ಯ ಬನಶಂಕರಿ ದೇವಿ ತರುಣ ನಾಟ್ಯ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪ್ರಕಾಶ ದಿಡಗೂರ ವಿರಚಿತ ರೊಚ್ಚಿಗೆದ್ದ ಹುಚ್ಚ ಮಿಡಿನಾಗರ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಮನರಂಜನೆಗಾಗಿ ಜನರು ಟಿವಿಗಳ ಮೋರೆ ಹೋಗಿದ್ದಾರೆ. ದೃಶ ಮಾಧ್ಯಮಗಳು ಪೈಪೋಟಿಗಿಳಿದು ಜನರಿಗೆ ಹೆಚ್ಚಿನ ಮನರಂಜನೆ ನೀಡುತ್ತಿವೆ. ಈ ಕಾರಣದಿಂದ ನಾಟಕ ನೋಡುಗರ ಸಂಖ್ಯೆ ಕುಸಿದೆ. ಇದರಿಂದ ರಂಗ ಭೂಮಿ ಅವಸಾನದ ಅಂಚಿಗೆ ತಲುಪಿದೆ. ಈ ಕಾರಣದಿಂದ ಗ್ರಾಮೀಣ ಜನರು ಹೆಚ್ಚು ಹೆಚ್ಚು ಸಾಮಾಜಿಕ ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ರಂಗ ಭೂಮಿಯನ್ನು ಉಳಿಸಬೇಕಾಗಿದೆ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಮಾತನಾಡಿದ ಜಿ.ಪಂ.ಸದಸ್ಯ ವಿರುಪಾಕ್ಷಪ್ಪ ಕಡ್ಲಿ ಅವರು, ಪ್ರಕಾಶ ದಿಡಗೂರ ಅವರು ಹೆಚ್ಚಿನ ನಾಟಕಗಳನ್ನು ರಚಿಸಿದ್ದಾರೆ. ಅವರ ಸಾಹಿತ್ಯ ಕೃಷಿ ಹೆಚ್ಚಿನ ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಲಿ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಬಸವರಾಜ ಹೆಡಿಗೊಂಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಸತೀಶ ಸಂದಿಮನಿ, ಸಿದ್ರಾಮೇಶ ಪುರದ, ಅನುಸೂಯಾ ಚನ್ನವೀರಪ್ಪನವರ, ಗೌರಮ್ಮ ಗೌಳಿ, ಹನುಮಣ್ಣ ಕನ್ನನಾಯಕ್ಕನವರ, ಶಿವಪ್ಪ ಅಜ್ಜಮ್ಮನವರ ಸೇರಿದಂತೆ ಮುಂತಾದವರು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 