ಧರ್ಮಸ್ಥಳ ಪುಣ್ಯ ಕ್ಷೇತ್ರಕ್ಕೆ ಅಪಚಾರ ಸಲ್ಲದು - ಎಸ್‌.ಈಶ್ವರ​‍್ಪ

ಧರ್ಮಸ್ಥಳ ಪುಣ್ಯ ಕ್ಷೇತ್ರಕ್ಕೆ ಅಪಚಾರ ಸಲ್ಲದು - ಎಸ್‌.ಈಶ್ವರ​‍್ಪ The sacred site of Dharmasthala should not be disrespected - S. Eshwarpa

ಧರ್ಮಸ್ಥಳ ಪುಣ್ಯ ಕ್ಷೇತ್ರಕ್ಕೆ ಅಪಚಾರ ಸಲ್ಲದು - ಎಸ್‌.ಈಶ್ವರ​‍್ಪ  

ಹೂವಿನಹಡಗಲಿ   08:  ’ಹಿಂದೂಗಳ ಪುಣ್ಯಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಚಾರ ಸಲ್ಲದು ಎಂದು  ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರ​‍್ಪ ಹೇಳಿದರು.ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ವ್ಯಾಪ್ತಿಯಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಅಪ ಪ್ರಚಾರ ಮಾಡಿದ್ದಾರೆ ಇದೀಗ  ಶವ ಶೋಧ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದರೂ, ಒಂದು ಅಸ್ಥಿಪಂಜರ ಮಾತ್ರ ಸಿಕ್ಕಿದೆ. ಹಾಗಾದರೆ, ನೂರಾರು ಶವಗಳು ಎಲ್ಲಿ ಹೋದವು ಎಂಬುದನ್ನು ಆರೋಪ ಮಾಡಿದವರೇ ಸ್ಪಷ್ಟಪಡಿಸಬೇಕು. ಪುಣ್ಯ ಕ್ಷೇತ್ರದ ಬಗ್ಗೆ ಯಾರೂ ಅಪಚಾರ ಮಾಡಬಾರದು. ಮಾಡಿದವರು ಅನುಭವಿಸುತ್ತಾರೆ ಎಂದರು. ಬಿಜೆಪಿಗೆ ಮರು ಸೇರೆ​‍್ಡ ಇಲ್ಲ :  ರಾಜ್ಯ ಬಿಜೆಪಿಯಲ್ಲಿ ಸರ್ವಾಧಿಕಾರ ಇದೆ. ಹಿಂದುತ್ವದ ಬಗ್ಗೆ ಅಭಿಪ್ರಾಯ ಸರಿ ಇಲ್ಲ. ಎಲ್ಲವನ್ನೂ ಗಮನಿಸುತ್ತಿರುವ ಕೇಂದ್ರದ ನಾಯಕರು ಸಮಸ್ಯೆ ಪರಿಹರಿಸುವ ಪ್ರಯತ್ನದಲ್ಲಿದ್ದಾರೆ. ಬಿಜೆಪಿ ಶುದ್ದೀಕರಣಗೊಳ್ಳುವ ವಿಶ್ವಾಸವಿದೆ’ ಎಂದು ತಿಳಿಸಿದರು.’ಸರ್ಕಾರದ ಖಜಾನೆ ತುಂಬಿದೆ ಎಂದು ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ರಸ್ತೆ ಗುಂಡಿಗಳನ್ನು ಮುಚ್ಚಲೂ ಇವರ ಬಳಿ ಹಣ ಇಲ್ಲ. ತಲಾ ?50 ಕೋಟಿ ಅನುದಾನ ನೀಡುವುದಾಗಿ ಸಿಎಂ ಶಾಸಕರ ಮೂಗಿಗೆ ತುಪ್ಪ ಸವರಿದ್ದಾರೆ. ಶಾಸಕರ ಮರ್ಯಾದೆ ಕಾಪಾಡಲು ರಸ್ತೆ ರಿಪೇರಿಗಾಗಿ ಸದ್ಯಕ್ಕೆ ತಲಾ ಒಂದು ಕೋಟಿಯಾದರೂ ನೀಡಲಿ’ ಎಂದು ಒತ್ತಾಯಿಸಿದರು.ಮುಖಂಡರಾದ ಈಟಿ ಲಿಂಗರಾಜ, ಸಿರಾಜ್ ಬಾವಿಹಳ್ಳಿ, ಕಾಲ್ವಿ ಜಂಬಣ್ಣ ಇತರರು ಇದ್ದರು.