ಕನ್ನಡದ ಹಣತೆ ಎದೆಯ ದೀಪವಾಗಬೇಕಾಗಿದೆ
The richness of Kannada should be a lamp in the heart
ಹೂವಿನಹಡಗಲಿ 3: ಕನ್ನಡದ ಹಣತೆ ಎದೆಯ ದೀಪವಾಗಬೇಕಾಗಿದೆ. ಎದೆಗೆ ಬಿದ್ದ ಅಕ್ಷರವಾಗಬೇಕಾಗಿದೆ. ಸಹಿಷ್ಣುತೆಯ ಬೆಳಕು ಬೀರಬೇಕಿದೆ ಎಂಬ ಕವನವಾಚಿಸುವುದರ ಮೂಲಕ ಕವಿ,ರಂಗ ನಿರ್ದೇಶಕ ಅಜಯ್ .ಚ ಹುಗಲೂರು ರಾಜ್ಯೋತ್ಸವ ಕವಿಗೋಷ್ಠಿಗೆ ಚಾಲನೆ ನೀಡಿದರು. ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಆಯೋಜಿಸಿದ್ದ ’ರಾಜ್ಯೋತ್ಸವ’ ಕವಿಗೋಷ್ಠಿಯಲ್ಲಿ ಕವನ ವಾಚಿಸುವುದರ ಮೂಲಕ ವರ್ತಮಾನದ ಕನ್ನಡದ ಮನಸ್ಸುಗಳು ಸಾಗಬೇಕಿರುವ ಮಾರ್ಗವನ್ನು ಸೂಚಿಸಿದರು. ಕವಿಗೋಷ್ಠಿಯಲ್ಲಿ ಟಿ.ಎಂ.ನಾಗಭೂಷಣ ’ಅವ್ವ’, ಎಂ.ಎಂ.ಗೌರಮ್ಮ ’ತಾಯಿ ಭುವನೇಶ್ವರಿ’, ಸಹದೇವಪ್ಪ ನಿಗದಿ ’ಕಟ್ಟೋಣ ಸಾಮರಸ್ಯದ ನಾಡು’,ನಾಗರಾಜ್ ಮಲ್ಕಿ ಒಡೆಯರ್ ’ಕನ್ನಡನಾಡು’, ಎಲ್.ಖಾದರ್ ಬಾಷಾ ’ವಿಶ್ವಪಥವಾಗಲಿ ಕನ್ನಡ’,ಡಾ.ಅನಿಲ್ ಕುಮಾರ್ ’ಸಾಮಾನ್ಯ ಕನ್ನಡಿಗ’, ಎಚ್.ಎಮ್. ಕೊಟ್ರಯ್ಯ ’ಅಭಿಮಾನವಿರಲಿ’, ಹೆಚ್.ಗಿರಿರಾಜ ’ಅಭಿಮಾನದ ಭೈರ್ಪ’, ಸಿ.ಎನ್. ಸೋಮೇಶಪ್ಪ ’ಕನ್ನಡ ಕವಿ ಪರಂಪರೆ’ ಯು.ರೇಣುಕಾ ’ಬಂಧನ’ಹಾಗೂ ಎ.ಅಶೋಕ ’ಉತ್ಸವ- ರಾಜ್ಯೋತ್ಸವ’ ಕವನಗಳನ್ನು ವಾಚಿಸಿ ಕನ್ನಡ ನಾಡು ನುಡಿ ಹಿರಿಮೆ, ಗರಿಮೆಗಳನ್ನ ಸಂಸ್ಕೃತಿ, ಪರಂಪರೆಗಳನ್ನು ಬಿಂಬಿಸಿ ಸಹೃದಯರಲ್ಲಿ ಅಭಿಮಾನದ ಭಾವ ಸ್ಪುರಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 