ವೇಮನ ಸಮಾಜದ ಅನುಭಾವ ಕವಿ: ಸುರೇಶ ಅಂಗಡಿ

ವೇಮನ ಸಮಾಜದ ಅನುಭಾವ ಕವಿ: ಸುರೇಶ ಅಂಗಡಿ The poet who experienced the Vemana society: Suresh Angadi

ಹೂವಿನ ಹಡಗಲಿ  19:  ಜನಜೀವನದ ಅತಿ ಸಾಮಾನ್ಯ ವಿಷಯಗಳನ್ನು ಸರಳ ನುಡಿಗಟ್ಟಿನಲ್ಲಿ ಕವಿತೆ ಕಟ್ಟಿದ ಅನುಭಾವ ಕವಿ ವೇಮನ ಎಂದು ಮುಖ್ಯ ಗುರುಗಳಾದ ಸುರೇಶ ಅಂಗಡಿ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ  ತುಂಗಭದ್ರಾ ಪ್ರೌಢಶಾಲೆಯಲ್ಲಿ ಸೋಮವಾರ ತೆಲುಗಿನ ಶ್ರೇಷ್ಠ ಕವಿ ವೇಮನ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.ಸಾಮಾಜಿಕ ಅಸಮಾನತೆ ಮತ್ತು ಅವಲಕ್ಷಣಗಳ ಮೇಲೆ ಬಂಡಾಯ ಹೂಡಿದ ವೈಚಾರಿಕತೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾವಿರಾರು ಸರಳ ಕವಿತೆಗಳನ್ನು ಕಟ್ಟಿದರು. ಮೂಢನಂಬಿಕೆ ಕಂದಾಚಾರ ಅಸ್ಪ್ರಶ್ಯತೆ ಜಾತಿಪದ್ಧತಿಯನ್ನು ಪ್ರಖರವಾಗಿ ಖಂಡಿಸಿದ ಜನಕವಿ ಎಂದು ಬಣ್ಣಿಸಿದರು.ಚಿತ್ರಕಲಾ ಶಿಕ್ಷಕರಾದ ಎಸ್ ದ್ವಾರಕೀಶ್ ವೇಮನ ರವರ ವಚನಗಳನ್ನು ಓದಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಎಂದರು. ಶಿಕ್ಷಕರಾದ ಆನಂದ್ ಜಿ ಬಸಪ್ಪ ಕೆ ಸ್ವಾಮಿನಾಥ ರಾಮಸ್ವಾಮಿ ಲಂಬಾಣಿ ಗಿಡ್ಡಾನಾಯ್ಕ್‌ ಗೀತಾ ಪಿ ಎಂ ಪ್ರತಿಮಾ ಎನ್ ರೇಖಾ ಎಸ್ ಸಂಗಮೇಶ ಸುಂಕದ ಪ್ರಸಾದ್ ಸಂತೋಷ್ ಕುಮಾರ್ ಎಸ್ ರಾಕೇಶ್ ಇತರರು ಇದ್ದರು.