ಕವಿ ಸಾಮಗೆ ಭಾಸೃಕಸಾ ಬಳಗದಿಂದ ಸನ್ಮಾನ
ಲೋಕದರ್ಶನ ವರದಿ
ಹಾವೇರಿ06: ನಗರದ ಹುಕ್ಕೇರಿಮಠದ ಸಭಾಂಗಣದಲ್ಲಿ ಇತ್ತೀಚೆಗೆ ಹಾವೇರಿ ಜಿಲ್ಲಾ ಘಟಕದ ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗದಿಂದ ಘಟಕದ ವಾಷರ್ಿಕೋತ್ಸವ ಜರುಗಿತು. ಕಾರ್ಯಕ್ರಮದಲ್ಲಿ ಬಳಗ ನಡೆದು ಬಂದ ಹಾದಿಯನ್ನು ಒಳಗೊಂಡ ವಾಷರ್ಿಕ ವರದಿಯನ್ನು ಮತ್ತು ವಿವೇಕಾನಂದ ಕಾವ್ಯಸಿರಿ ಸಂಪಾದಿಸಿದ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ವಿಶ್ವದಾಖಲೆ ಪುರಸ್ಕೃತ ಬರಹಗಾರ ಸೋಮನಕಟ್ಟಿಯ ವೀರನಗೌಡ ಪಾಟೀಲ (ಸಾಮ) ಅವರನ್ನು ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇವರು ಕನ್ನಡದಲ್ಲಿ 'ಹ' ಕಾಗುಣಿತಾಕ್ಷರಗಳಿಂದಲೇ ಪ್ರತಿಯೊಂದು ಶಬ್ದವೂ ಪ್ರಾರಂಭವಾಗುವಂತೆ ರಚಿಸಿದ 300(ಪ್ರಸ್ತುತ 500) ಪುಟಗಳ ವಿಶೇಷ ಕಾದಂಬರಿ ವಿಶ್ವದಾಖಲೆ ಸೇರಿದಂತೆ ಒಟ್ಟು ನಾಲ್ಕು ದಾಖಲೆ ಪ್ರಶಸ್ತಿ ಪಡೆದಿರುವುದು ವಿಶೇಷವಾಗಿದೆ.
ಸನ್ಮಾನ ಕಾರ್ಯಕ್ರಮದಲ್ಲಿ ಭಾಸೃಕಸಾ ಬಳಗದ ಜಿಲ್ಲಾಧ್ಯಕ್ಷ ಸಂತೋಷ ಬಿದರಗಡ್ಡೆ, ಕವಿವೃಕ್ಷ ಬಳಗದ ಜಿಲ್ಲಾಧ್ಯಕ್ಷ ವೆಂಕಟೇಶ ಈಡಿಗೇರ, ಖ್ಯಾತ ಸಂಘಟಕ ಪ್ರಭಾಕರ ಶಿಗ್ಲಿ, ಸಾಹಿತಿಗಳಾದ ಭಾಗ್ಯ.ಎಂ.ಕೆ, ಶಕುಂತಲಾ ದಾಳೇರ,ದಾವಲ ಮಲೀಕ ಇಂಗಳಗಿ, ರಾಹೀಲ್ ರಾಜಾಭಕ್ಷು.ಸಿ.ಎಂ, ಸಿ.ಜಿ.ಮಲ್ಲೂರ ಹಾಗೂ ಪೀರಸಾಬ್ ನದಾಫ್ ಇತರರು ಉಪಸ್ಥಿತರಿದ್ದರು.
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ? 