ಕವಿ ಸಾಮಗೆ ಭಾಸೃಕಸಾ ಬಳಗದಿಂದ ಸನ್ಮಾನ
ಲೋಕದರ್ಶನ ವರದಿ
ಹಾವೇರಿ06: ನಗರದ ಹುಕ್ಕೇರಿಮಠದ ಸಭಾಂಗಣದಲ್ಲಿ ಇತ್ತೀಚೆಗೆ ಹಾವೇರಿ ಜಿಲ್ಲಾ ಘಟಕದ ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗದಿಂದ ಘಟಕದ ವಾಷರ್ಿಕೋತ್ಸವ ಜರುಗಿತು. ಕಾರ್ಯಕ್ರಮದಲ್ಲಿ ಬಳಗ ನಡೆದು ಬಂದ ಹಾದಿಯನ್ನು ಒಳಗೊಂಡ ವಾಷರ್ಿಕ ವರದಿಯನ್ನು ಮತ್ತು ವಿವೇಕಾನಂದ ಕಾವ್ಯಸಿರಿ ಸಂಪಾದಿಸಿದ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ವಿಶ್ವದಾಖಲೆ ಪುರಸ್ಕೃತ ಬರಹಗಾರ ಸೋಮನಕಟ್ಟಿಯ ವೀರನಗೌಡ ಪಾಟೀಲ (ಸಾಮ) ಅವರನ್ನು ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇವರು ಕನ್ನಡದಲ್ಲಿ 'ಹ' ಕಾಗುಣಿತಾಕ್ಷರಗಳಿಂದಲೇ ಪ್ರತಿಯೊಂದು ಶಬ್ದವೂ ಪ್ರಾರಂಭವಾಗುವಂತೆ ರಚಿಸಿದ 300(ಪ್ರಸ್ತುತ 500) ಪುಟಗಳ ವಿಶೇಷ ಕಾದಂಬರಿ ವಿಶ್ವದಾಖಲೆ ಸೇರಿದಂತೆ ಒಟ್ಟು ನಾಲ್ಕು ದಾಖಲೆ ಪ್ರಶಸ್ತಿ ಪಡೆದಿರುವುದು ವಿಶೇಷವಾಗಿದೆ.
ಸನ್ಮಾನ ಕಾರ್ಯಕ್ರಮದಲ್ಲಿ ಭಾಸೃಕಸಾ ಬಳಗದ ಜಿಲ್ಲಾಧ್ಯಕ್ಷ ಸಂತೋಷ ಬಿದರಗಡ್ಡೆ, ಕವಿವೃಕ್ಷ ಬಳಗದ ಜಿಲ್ಲಾಧ್ಯಕ್ಷ ವೆಂಕಟೇಶ ಈಡಿಗೇರ, ಖ್ಯಾತ ಸಂಘಟಕ ಪ್ರಭಾಕರ ಶಿಗ್ಲಿ, ಸಾಹಿತಿಗಳಾದ ಭಾಗ್ಯ.ಎಂ.ಕೆ, ಶಕುಂತಲಾ ದಾಳೇರ,ದಾವಲ ಮಲೀಕ ಇಂಗಳಗಿ, ರಾಹೀಲ್ ರಾಜಾಭಕ್ಷು.ಸಿ.ಎಂ, ಸಿ.ಜಿ.ಮಲ್ಲೂರ ಹಾಗೂ ಪೀರಸಾಬ್ ನದಾಫ್ ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 