ಲಿಂಗೈಕ್ಯ ಡಾ. ಶಿವರಾತ್ರಿ ಸ್ವಾಮಿಗಳ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ

ಲಿಂಗೈಕ್ಯ ಡಾ. ಶಿವರಾತ್ರಿ ಸ್ವಾಮಿಗಳ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ The message of gender equality, Dr. Shivaratri Swami, is relevant for all times.

ಲಿಂಗೈಕ್ಯ ಡಾ. ಶಿವರಾತ್ರಿ ಸ್ವಾಮಿಗಳ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ 


ಗದಗ 29: ಲಿಂಗೈಕ್ಯ ಡಾ. ಶಿವರಾತ್ರಿ ಮಹಾಸ್ವಾಮಿಗಳು ಬಾಲ್ಯಾವಧಿಯಿಂದಲೂ ಸಮಾಜಮುಖಿ ಜೀವನ ನಡೆಸುತ್ತ ಲಿಂಗದೀಕ್ಷೆ ನಂತರ ತಮ್ಮನ್ನು ಸಂಪೂರ್ಣ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅವರಿವರೆನ್ನದೆ ಮಾನವಕುಲದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ಇಂದಿಗೂ ಪ್ರಸ್ತುತರಾಗಿದ್ದಾರೆಂದು ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ. ಶಕುಂತಲಾ ಸಿಂಧೂರ ಹೇಳಿದರು. ಅವರು ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಸಂಯುಕ್ತವಾಗಿ ಹುಲಕೋಟಿಯ ಶ್ರೀ ಕೆ.ಎಚ್‌. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಘಟಕದ ಅಡಿಯಲ್ಲಿ ಹಮ್ಮಿಕೊಂಡಿದ್ದ ‘ಲಿಂ. ಡಾ. ಶಿವರಾತ್ರಿ ಸ್ವಾಮಿಗಳ ಜನ್ಮದಿನ’ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡುತ್ತ, ಶ್ರೀಗಳು ಗದಗ ನಗರದಲ್ಲಿ ಶರಣ ಸಾಹಿತ್ಯ ಪರಿಷತ್ತು ಸ್ಥಾಪಿಸುವ ಮೂಲಕ ಜಿಲ್ಲೆಯಲ್ಲಿ ಶರಣರ ಸಂದೇಶಗಳ ಚಿಂತನೆ ಸದಾಕಾಲ ಮುಂದುವರೆಯುವಂತೆ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಅವರ ಜೀವನ ಮತ್ತು ಲೋಕಕಲ್ಯಾಣ ಕಾರ್ಯಗಳನ್ನು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಹೇಳಿದರು. 

ಕಾರ್ಯಕ್ರಮವನ್ನು ಉದ್ಘಾಟಿಸಿದ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ಪ್ರಸ್ತುತ ಸಂಧರ್ಭದಲ್ಲಿ ಶರಣರ ನಡೆನುಡಿಯ ಅಗತ್ಯ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಸುಧಾ ಕೌಜಗೇರಿ ವಿದ್ಯಾರ್ಥಿಗಳು ಶರಣರ ಬದುಕನ್ನು ಅವಲೋಕಿಸಿ ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಉಪದೇಶಿಸಿದರು. ಇತಿಹಾಸ ಪ್ರಾಧ್ಯಾಪಕ ಮತ್ತು ಎನ್‌.ಎಸ್‌.ಎಸ್‌. ಘಟಕದ ಸಂಯೋಜಕ ಡಾ. ಅಪ್ಪಣ್ಣ ಹಂಜೆ ಸ್ವಾಗತಿಸಿದರು. ಎಸ್‌.ಎಂ. ಮರಿಗೌಡ್ರ ನಿರೂಪಿಸಿದರು. ಡಿ.ಎಸ್‌. ಬಾಪುರಿ ವಂದನಾರೆ​‍್ಣಗೈದರು. ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಘಟಕದ ಸಂಚಾಲಕ ಡಾ. ಜಿತೇಂದ್ರ ಜಹಗೀರದಾರ, ಸಾಂಸ್ಕೃತಿಕ ವಿಭಾಗದ ಸಂಚಾಲಕ ರಮೇಶ ಹುಲಕುಂದ, ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಹುಸೇನಭಾಷಾ ಮತ್ತು ಮಹಾಂತೇಶ, ಇಂಗ್ಲೀಷ ಪ್ರಾಧ್ಯಾಪಕಿ ಸಾವಿತ್ರಿ, ಬಿಎ. ಬಿ.ಎಸ್ಸಿ., ಬಿ.ಕಾಂ. ವಿದ್ಯಾರ್ಥಿಗಳು ಭಾಗವಹಿಸಿದ್ದರು.