ಕಠಿಣ ಪರಿಶ್ರಮ, ಕಾರ್ಯಶ್ರದ್ಧೆಯಿಂದ ಯಶಸ್ಸು ಸಾಧ್ಯ: ಹಂಜಗಿ

ಕಠಿಣ ಪರಿಶ್ರಮ, ಕಾರ್ಯಶ್ರದ್ಧೆಯಿಂದ ಯಶಸ್ಸು ಸಾಧ್ಯ: ಹಂಜಗಿ Success is possible through hard work and dedication: Hanjagi

         ವಿಜಯಪುರ 25: ಕಾರ್ಯನಿುಷ್ಠೆ, ಸತತ ಅಧ್ಯಯನ, ಕಠಿಣ ಪರಿಶ್ರಮ ಮತ್ತು ಸೃಜನಾತ್ಮಕತೆಯೊಂದಿಗೆ ಗುರಿಯ ಬೆನ್ನು ಹತ್ತಿ ಕಾರ್ಯಸಾಧನೆಯತ್ತ ಸಾಗಿದರೆ ಖಂಡಿತವಾಗಿಯೂ ಯಶಸ್ಸು ಕಟ್ಟಿಟ್ಟ ಬುತ್ತಿ. ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಬೇಕೆಂದರೆ ಅದೊಂದು ಭಾಗ್ಯವೇ ಸರಿ. ಆದ್ದರಿಂದ ನಾವೆಲ್ಲರೂ ಸದಾ ವಿದ್ಯಾರ್ಥಿಗಳಿಗೆ ಉತ್ಕೃಷ್ಠ ಗುಣಮಟ್ಟ ನೀಡುವದರೊಂದಿಗೆ ಮತ್ತು ಸ್ಪರ್ಧಾತ್ಮಕತೆಯನ್ನು ಬೆಳೆಸುವಂತಹ ಗುಣವನ್ನು ಬೆಳೆಸಬೇಕೆಂದು ಎಂದು ಪ್ರಾಂಶುಪಾಲ ಡಾ. ಎ.ಐ.ಹಂಜಗಿ ಅವರು ಅಭಿಪ್ರಾಯಪಟ್ಟರು. 

ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರೊ. ಅಶ್ವೀನಿ ರಾಮಪೂರ ಸಸ್ಯಶಾಸ್ತ್ರ ವಿಭಾಗ ಇವರ ಸಾಧನೆಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 

ಇಂದು ಸರ್ಕಾರಿ ಕಾಲೇಜುಗಳಲ್ಲಿ ಒಳ್ಳೆಯ ಶೈಕ್ಷಣಿಕ ಅರ್ಹತೆ, ಅನುಭವ ಹೊಂದಿದ ಮತ್ತು ನುರಿತ ಪ್ರಾಧ್ಯಾಪಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಬೋಧನೆ-ಕಲಿಕೆಗೆ ಬೇಕಾದ ಎಲ್ಲ ಸೌಲಭ್ಯಗಳೊಂದಿಗೆ ಖಾಸಗಿ ಕಾಲೇಜುಗಳಿಗೆ ಮೀರಿದ ಗುಣಮಟ್ಟದೊಂದಿಗೆ ಶೈಕ್ಷಣಿಕ ಜ್ಞಾನವನ್ನು ನೀಡುತ್ತಿವೆ ಎಂದರು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ. ಅಶ್ವೀನಿ ರಾಮಪೂರ ಅವರು ಮಾತನಾಡುತ್ತಾ, ಇದೇ ಕಾಲೇಜಿನಲ್ಲಿ ನಾಲ್ಕು ವರ್ಷಗಳವರೆಗೆ ಸೇವೆ ಸಲ್ಲಿಸಿ, ಪ್ರಸ್ತುತ ಈ ಸರ್ಕಾರಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದಾ ವಿದ್ಯಾರ್ಥಿಗಳ ಸರ್ವಂಗೀಣ ಬೆಳವಣಿಗೆ ಮತ್ತು ಸಂಸ್ಥೆಯ ಪ್ರಗತಿಗೆ ಶ್ರಮಿಸುತ್ತೇನೆ. ಈ ಕಾಲೇಜು ನನಗೆ ಎಲ್ಲವನ್ನು ಕೊಟ್ಟಿದೆ. ಯಾವಾಗಲೂ ವಿದ್ಯಾರ್ಥಿಗಳ ಜ್ಞಾನಧಾರೆದು ಜನನಿ, ಜನ್ಮಭೂಮಿ ಮತ್ತು ಶಿಕ್ಷಣ ನೀಡಿದ ಸಂಸ್ಥೆಗೆ ಋಣಯಾಗಿರುತ್ತೇನೆ ಎಂದರು. 

ಪ್ರಾಧ್ಯಾಪಕ ಡಾ. ಚಿದಾನಂದ ಆನೂರ, ಪ್ರೊ. ಎಂ.ಎಸ್‌.ಖೊದ್ನಾಪೂರ, ಡಾ. ಚಂದ್ರಕಾಂತ, ಡಾ. ಸಂತೋಷ ಕಬಾಡೆ, ಪ್ರೊ. ಸುನೀಲ ತೋಂಟಾಪೂರ, ಡಾ. ಶಿವಾನಂದ ಜಮಾದಾರ, ಡಾ. ರೋಹಿಣಿ ಹಿರೇಶೆಡ್ಡಿ, ಡಾ. ಶೀರಿನ ಸುಲ್ತಾನಾ ಇನಾಮದಾರ, ಪ್ರೊ. ಸಂಗಮೇಶ ಗುರವ, ಉಸ್ಮಾನಸಾಬ ಮುಜಾವರ, ಮಲ್ಲು ಗೋಠೆ ಹಾಗೂ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.