ಜಾಗೃತ ಸಮಿತಿಗೆ ಸೋಮು ಎಚ್‌. ಹಿಪ್ಪರಗಿ ನೇಮಕ

ಜಾಗೃತ ಸಮಿತಿಗೆ ಸೋಮು ಎಚ್‌. ಹಿಪ್ಪರಗಿ ನೇಮಕ Somu H. Hipparagi appointed to Vigilance Committee

ವಿಜಯಪುರ 29: ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿಗೆ ವಿಜಯಪುರದ ಸೋಮು ಎಚ್‌. ಹಿಪ್ಪರಗಿ ಅವರನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಸೋಮು ಹಿಪ್ಪರಗಿ ಅವರು ಅರಣ್ಯ ಅಧಿಕಾರಿಯಾಗಿದ್ದು, ಪ್ರಸ್ತುತ ಕರ್ನಾಟಕ ಸರಕಾರದಿಂದ ಉನ್ನತ ವ್ಯಾಸಂಗ ರಜೆಯ ಮೇಲೆ, ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ- ಕಾಸರಗೋಡು ಕನ್ನಡ ವಿಧಾಗದ ಡಾ. ಗೋವಿಂದರಾಜು ಎಮ್‌.ಕಲ್ಲೂರು ಅವರ ಮಾರ್ಗದರ್ಶನದಲ್ಲಿ ’ರಾಮಾಯಣ ಮಹಾಕಾವ್ಯದಲ್ಲಿ ವನ್ಯ ಸಂಸ್ಕೃತಿ’ ಎಂಬ ವಿಷಯದ ಮೇಲೆ ಸಂಶೋಧನೆ ಕೈಗೊಂಡಿದ್ದಾರೆ. ಇಂಗ್ಲಿಷ್ ಹಾಗೂ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದದ್ದು,  ಮೋಡದ ಮರೆಯಲಿ ನನ್ನೆದೆಯ ಬಾನುಲಿ ಇವರ ಮೊದಲ ಕವನ ಸಂಕಲನ. ಪರಿಸರ, ಬುಡಕಟ್ಟು ಸಂಸ್ಕೃತಿ,  ಜಾನಪದ ಮತ್ತು ಹಳೆಗನ್ನಡ ಸಾಹಿತ್ಯ ಇವರ ಆಸಕ್ತಿ ವಿಷಯಗಳಾಗಿದ್ದು, ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದಾರೆ.