ಉತ್ತರ ಕನ್ನಡದಲ್ಲಿ ಶಿವರಾತ್ರಿ ಸಂಭ್ರಮ : ಎಲ್ಲೆಡೆ ಭಕ್ತರ ಮಹಾಪೂರ - ಬಿಸಿಲಿಗೆ ಓರ್ವನ ಸಾವು
Shivaratri celebrations in Uttara Kannada:
ಕಾರವಾರ 15 : ಉತ್ತರ ಕನ್ನಡದಲ್ಲಿ ಶಿವರಾತ್ರಿ ಸಂಭ್ರಮ ಮುಗಿಲು ಮುಟ್ಟಿತ್ತು. ಕಾರವಾರದ ಸಜ್ಜೇಶ್ವರ, ಧಾರೇಶ್ವರದ ಶಿವಲಿಂಗ ದೇವಸ್ಥಾನ, ಗುಣವಂತೆಯ ಗುಣವಂತೇಶ್ವರ, ಮುರುಡೇಶ್ವರಗಳಲ್ಲಿ ಶಿವನ ದೇವಾಲಯಗಳು ಭಕ್ತರಿಂದ ತುಂಬಿ ಹೋಗಿದ್ದವು. ಕವಳಾ ಗುಹೆಯ ಶಿವಲಿಂಗ, ಶಿರಸಿ ಸನಿಹದ ಸಹಸ್ರ ಲಿಂಗ , ಯಾಣದ ಶಿವದೇವಸ್ಥಾನ ಸೇರಿದಂತೆ ಶಿವನ ಆಲಯಗಳು ಎಲ್ಲೆಡೆ ಭಕ್ತರ ಮಹಾಪೂರದಿಂದ ತುಂಬಿದ್ದವು.
ಜನರು ಭಕ್ತಿ ಶ್ರದ್ಧೆ ಯಿಂದ ಶಿವಲಿಂಗವನ್ನು ಆರಾಧಿಸಿದರು. ಭಕ್ತರು ಸಾಲುಗಟ್ಟಿ ಬಿಸಿಲಿನಲ್ಲಿಯೂ ಭಕ್ತಿ ಮೆರೆದರು. ಗೋಕರ್ಣದಲ್ಲಿ , ಮುರುಡೇಶ್ವರದಲ್ಲಿ ಸಾಲುಗಟ್ಟಿ ನಿಂತು ಶಿವನ ಪೂಜೆ ಅಭಿಷೇಕದಲ್ಲಿ ಜನ ನಿರತರಾಗಿದ್ದರು. ಭಕ್ತರು ಹಾಲು ಹಾಗೂ ಎಳನೀರಿನಿಂದ ಲಿಂಗಕ್ಕೆ ಅಭಿಷೇಕ ಮಾಡಿ ಹರಕೆ ತೀರಿಸಿದರೆ, ಕೆಲವರು ಬಿಲ್ವಪತ್ರೆ ಅರ್ಿಸುವ ಮೂಲಕ ಭಕ್ತಿ ಮೆರೆದರು. ಜಿಲ್ಲೆಯ ಎಲ್ಲಾ ಶಿವ ಕ್ಷೇತ್ರಗಳು ಶಿವ ಭಕ್ತರಿಂದ ತುಂಬಿ ತುಳುಕಿದವು.ಜೊಯಿಡಾದ ಕವಳ ಕೇವ್ಸ ಶಿವಲಿಂಗಕ್ಕೆ ಜನ ಹೊರ ಜಿಲ್ಲೆಯಿಂದ ಆಗಮಿಸಿ ,ದಟ್ಟ ಕಾನನದಲ್ಲಿ ಸಾಲುಗಟ್ಟಿ ಹನ್ನೆರಡು ತಾಸು ಕಾದು ಲಿಂಗದ ಮುಖ ನೋಡಿ, ಹೂ ಹಣ್ಣು ಕಾಯಿ ಅರ್ಿಸಿ ಧನ್ಯರಾದರು.
ದೇವಸ್ಥಾನಗಳ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತನಲ್ಲಿ ಅವಘಡ ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು. ಗೋಕರ್ಣದಲ್ಲಿ ಬಿಸಿಲಿಗೆ ಓರ್ವ ವ್ಯಕ್ತಿಯು ಸಾವು ಕಂಡಿದ್ದು, ಆತ ಉತ್ತರ ಗೋವಾದ ರತ್ನಾಕರ ಎಂದು ತಿಳಿದು ಬಂದಿದೆ. ಆತ ಹೃದಯ ಕಾಯಿಲೆಯ ವ್ಯಕ್ತಿ ಆಗಿದ್ದು, ಬಿಸಲಲ್ಲಿ ಸರತಿ ಸಾಲಲ್ಲಿ ನಿಂತು ದೇವರ ದರ್ಶನ ಪಡೆದಿದ್ದ. ಲಿಂಗ ಪೂಜೆ ಮುಗಿಸಿ ಹೊರಬಂದ ನಂತರ ಕುಸಿದು ಬಿದ್ದು ಮೃತಪಟ್ಟ ಎಂದು ಪೊಲೀಸ್ ವರದಿಗಳು ಹೇಳಿವೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 