ಉತ್ತರ ಕನ್ನಡದಲ್ಲಿ ಶಿವರಾತ್ರಿ ಸಂಭ್ರಮ : ಎಲ್ಲೆಡೆ ಭಕ್ತರ ಮಹಾಪೂರ - ಬಿಸಿಲಿಗೆ ಓರ್ವನ ಸಾವು
Shivaratri celebrations in Uttara Kannada:
ಕಾರವಾರ 15 : ಉತ್ತರ ಕನ್ನಡದಲ್ಲಿ ಶಿವರಾತ್ರಿ ಸಂಭ್ರಮ ಮುಗಿಲು ಮುಟ್ಟಿತ್ತು. ಕಾರವಾರದ ಸಜ್ಜೇಶ್ವರ, ಧಾರೇಶ್ವರದ ಶಿವಲಿಂಗ ದೇವಸ್ಥಾನ, ಗುಣವಂತೆಯ ಗುಣವಂತೇಶ್ವರ, ಮುರುಡೇಶ್ವರಗಳಲ್ಲಿ ಶಿವನ ದೇವಾಲಯಗಳು ಭಕ್ತರಿಂದ ತುಂಬಿ ಹೋಗಿದ್ದವು. ಕವಳಾ ಗುಹೆಯ ಶಿವಲಿಂಗ, ಶಿರಸಿ ಸನಿಹದ ಸಹಸ್ರ ಲಿಂಗ , ಯಾಣದ ಶಿವದೇವಸ್ಥಾನ ಸೇರಿದಂತೆ ಶಿವನ ಆಲಯಗಳು ಎಲ್ಲೆಡೆ ಭಕ್ತರ ಮಹಾಪೂರದಿಂದ ತುಂಬಿದ್ದವು.
ಜನರು ಭಕ್ತಿ ಶ್ರದ್ಧೆ ಯಿಂದ ಶಿವಲಿಂಗವನ್ನು ಆರಾಧಿಸಿದರು. ಭಕ್ತರು ಸಾಲುಗಟ್ಟಿ ಬಿಸಿಲಿನಲ್ಲಿಯೂ ಭಕ್ತಿ ಮೆರೆದರು. ಗೋಕರ್ಣದಲ್ಲಿ , ಮುರುಡೇಶ್ವರದಲ್ಲಿ ಸಾಲುಗಟ್ಟಿ ನಿಂತು ಶಿವನ ಪೂಜೆ ಅಭಿಷೇಕದಲ್ಲಿ ಜನ ನಿರತರಾಗಿದ್ದರು. ಭಕ್ತರು ಹಾಲು ಹಾಗೂ ಎಳನೀರಿನಿಂದ ಲಿಂಗಕ್ಕೆ ಅಭಿಷೇಕ ಮಾಡಿ ಹರಕೆ ತೀರಿಸಿದರೆ, ಕೆಲವರು ಬಿಲ್ವಪತ್ರೆ ಅರ್ಿಸುವ ಮೂಲಕ ಭಕ್ತಿ ಮೆರೆದರು. ಜಿಲ್ಲೆಯ ಎಲ್ಲಾ ಶಿವ ಕ್ಷೇತ್ರಗಳು ಶಿವ ಭಕ್ತರಿಂದ ತುಂಬಿ ತುಳುಕಿದವು.ಜೊಯಿಡಾದ ಕವಳ ಕೇವ್ಸ ಶಿವಲಿಂಗಕ್ಕೆ ಜನ ಹೊರ ಜಿಲ್ಲೆಯಿಂದ ಆಗಮಿಸಿ ,ದಟ್ಟ ಕಾನನದಲ್ಲಿ ಸಾಲುಗಟ್ಟಿ ಹನ್ನೆರಡು ತಾಸು ಕಾದು ಲಿಂಗದ ಮುಖ ನೋಡಿ, ಹೂ ಹಣ್ಣು ಕಾಯಿ ಅರ್ಿಸಿ ಧನ್ಯರಾದರು.
ದೇವಸ್ಥಾನಗಳ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತನಲ್ಲಿ ಅವಘಡ ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು. ಗೋಕರ್ಣದಲ್ಲಿ ಬಿಸಿಲಿಗೆ ಓರ್ವ ವ್ಯಕ್ತಿಯು ಸಾವು ಕಂಡಿದ್ದು, ಆತ ಉತ್ತರ ಗೋವಾದ ರತ್ನಾಕರ ಎಂದು ತಿಳಿದು ಬಂದಿದೆ. ಆತ ಹೃದಯ ಕಾಯಿಲೆಯ ವ್ಯಕ್ತಿ ಆಗಿದ್ದು, ಬಿಸಲಲ್ಲಿ ಸರತಿ ಸಾಲಲ್ಲಿ ನಿಂತು ದೇವರ ದರ್ಶನ ಪಡೆದಿದ್ದ. ಲಿಂಗ ಪೂಜೆ ಮುಗಿಸಿ ಹೊರಬಂದ ನಂತರ ಕುಸಿದು ಬಿದ್ದು ಮೃತಪಟ್ಟ ಎಂದು ಪೊಲೀಸ್ ವರದಿಗಳು ಹೇಳಿವೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 