ಶಿರಹಟ್ಟಿ : ಪಾಲಕರ ಕನಸನ್ನು ಸಾಕಾರಗೊಳಿಸಿದ ಸಾನಿಯಾ ಢಾಲಾಯತ್
ಲೋಕದರ್ಶನ ವರದಿ
ಶಿರಹಟ್ಟಿ 04: ವಿದ್ಯಾ ದೇವತೆ ಕಠಿಣ ತಪಸ್ಸಿಗೆ ಮಾತ್ರ ಒಲಿಯುತ್ತಾಳೆ ಅಲ್ಲದೆ ಆಡಂಬರಕ್ಕಲ್ಲ. ಅವಳಿಗೆ ಬಡವ ಬಲ್ಲಿದ, ಹಳ್ಳಿ ಪಟ್ಟಣವೆಂಬ ಬೇಧ ಭಾವವಿಲ್ಲ. ಅದಕ್ಕೆ ಪಟ್ಟಣದ ಸಾನಿಯಾ ಢಾಲಾಯತ ಒಂದೊಳ್ಳೆ ಉದಾಹರಣೆಯಾಗಿದ್ದಾಳೆ.
ಪಟ್ಟಣದ ಮ್ಯಾಗೇರಿ ಓಣಿಯ ಸಾನಿಯಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.96ರಷ್ಟು ಅಂಕಗಳನ್ನು ಪಡೆದು ಶಿಕ್ಷಣಕ್ಕೆ ಬಡತನ ಅಡ್ಡಿಯಾಗಲಾರದು ಎಂದು ಉಳಿದವರಿಗೆ ಮಾದರಿಯಾಗುವ ಹಾಗೆ ತಮ್ಮ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಸರಕಾರಿ ನೌಕರಿಯಲ್ಲಿದ್ದರೂ ಜೀವನ ಸಾಗಿಸಲು ಕಷ್ಠವಿರುವ ಇಂದಿನ ದುಬಾರಿ ಕಾಲದಲ್ಲಿ ವೃತ್ತಿಯಲ್ಲಿ ಟೇಲರ್ ಆಗಿರುವ ಮೊಹಮ್ಮದಲಿ ಢಾಲಾಯತ ಬಡತನದ ಬದುಕಿನಲ್ಲಿ ತಾವು ಕಲೆತಿದ್ದು 7 ತರಗತಿವರೆಗೆ ಆದರೂ ತನ್ನಂತೆ ತಮ್ಮ ಮಕ್ಕಳು ಕೂಲಿ ನಾಲಿ ಮಾಡುವದು ಬೇಡ ಅಕ್ಷರಗಳನ್ನು ಕಲೆತು ನಾಲ್ಕಾರು ಜನರಿಗೆ ದಾರಿ ದೀಪವಾಗ ಬೇಕೆಂದು ಪಟ್ಟಣದ ಪ್ರತಿಷ್ಠಿತ ಸಿ.ಸಿ.ಎನ್ ಶಾಲೆಯಲ್ಲಿ ಮಗಳಿಗೆ ವಿದ್ಯಾಭ್ಯಾಸ ದೊರಕಿಸಿ ಕೊಟ್ಟಿದ್ದಾರೆ. ಇನ್ನೂ ಮಗಳು ಅಪ್ಪನ ಆಸೆಯಂತೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 