ಕಾಲ್ವಿ ಗ್ರಾ.ಪಂ.ಅದ್ಯಕ್ಷರಾಗಿ ಶಾಂತವ್ವ ಆಯ್ಕೆ
Shantavva elected as Calvi Gram Panchayat President
ಕಾಲ್ವಿ ಗ್ರಾ.ಪಂ.ಅದ್ಯಕ್ಷರಾಗಿ ಶಾಂತವ್ವ ಆಯ್ಕೆ
ಹೂವಿನಹಡಗಲಿ 06 : ತಾಲ್ಲೂಕಿನ ಕಾಲ್ವಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಎಲ್.ಶಾಂತವ್ವ ದೇವೇಂದ್ರನಾಯ್ಕ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಚನ್ನರಾಜನಾಯ್ಕ 11ಮತ ಪಡೆದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಾಂತವ್ವ 13ಮತಗಳನ್ನು ಪಡೆದು ಅದ್ಯಕ್ಷ ರಾಗಿ ಆಯ್ಕೆಯನ್ನು ಚುನಾವಣಾ ಅಧಿಕಾರಿ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಸೋಲಿಗೆ ಮುಖ ಭಂಗ ವಾಗಿದೆ.ಈ ವೇಳೆ ಬಿಜೆಪಿ ಬೆಂಬಲಿತರು ಸಿಹಿ ಹಂಚಿ ಸಂಭ್ರಮಿಸಿದರು.ಈ ವೇಳೆ ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಮಂಡಲಾ ಅಧ್ಯಕ್ಷರಾದ ಪೂಜಾರ್ ಮಲ್ಲಿಕಾರ್ಜುನ್, ಮುಖಂಡರಾದ ಎಂ. ಪರಮೇಶ್ವರ್ಪ ವಕೀಲರು, ವಾರದ ಗೌಸ್ ಮೋದಿನ್, ಬೊರ್ವೆಲ್ ಕೋಟೆಪ್ಪ, ದಾಸರಹಳ್ಳಿ ತಾಂಡ ಕೃಷ್ಣ ನಾಯ್ಕ, ಬಸರಹಳ್ಳಿ ತಾಂಡ ಕೃಷ್ಣ ನಾಯ್ಕ, ಅಂಕ್ಲಿ ಜಿ. ಶಿವಕುಮಾರ ವಕೀಲರು, ಲಂಕೇಶ್ ನಾಯ್ಕ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು..
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 