ಶಾಲಾ ಶಿಕ್ಷಕಿಯ ಮೇಲೆ ಹಲ್ಲೆ, ಖಂಡನೆ, ಕ್ರಮಕ್ಕೆ ಒತ್ತಾಯ

ಶಾಲಾ ಶಿಕ್ಷಕಿಯ ಮೇಲೆ ಹಲ್ಲೆ, ಖಂಡನೆ, ಕ್ರಮಕ್ಕೆ ಒತ್ತಾಯ School teacher attacked, condemned, action demanded

ಶಾಲಾ ಶಿಕ್ಷಕಿಯ ಮೇಲೆ ಹಲ್ಲೆ, ಖಂಡನೆ, ಕ್ರಮಕ್ಕೆ ಒತ್ತಾಯ 

ಕೊಪ್ಪಳ 13:  ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕ್ಷೇತ್ರನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಂಜುಳಾ ಎಂಬುವರ ಮೇಲೆ ಚೌಡಪ್ಪ ಎಂಬುವರು ಹಲ್ಲೆ ಮಾಡಿರುವ ಕ್ರಮವನ್ನು ಖಂಡಿಸುವುದರ ಜೊತೆಗೆ  ಅಂಥವರ ವಿರುದ್ದ ಸೂಕ್ತ ಕ್ರಮವನ್ನು ಸರಕಾರ ಕೈಗೊಳ್ಳಬೇಕು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಶಿಕ್ಷಕರ ಸಂಘದ ನಿದೇಶಕರಾದ ಬೀರ​‍್ಪ ಅಂಡಗಿ ಚಿಲವಾಡಗಿ  ಒತ್ತಾಯಿಸಿದ್ದಾರೆ. 

 ಈ ವಿಷಯ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶಾಲೆ ಬಿಟ್ಟ ಮಗುವನ್ನು ಯಾವ ಕಾರಣಕ್ಕೆ ಶಾಲೆಯನ್ನು ಬಿಟ್ಟಿರುವುದಾಗಿ ಪ್ರಶ್ನೆ ಮಾಡಿದರ ಹಿನ್ನಲೆಯಲ್ಲಿ ಅವರ ಮಗುವಿನ ತಂದೆ ಏಕಾಏಕಿ ಶಿಕ್ಷಕಿಯ ಮೇಲೆ ಹಲ್ಲೆ ಮಾಡಿರುವುದು ಖಂಡೀನೀಯವಾಗಿದೆ. ಇಂತಹ ಘಟನೆಗಳಿಂದ ಶಿಕ್ಷಕರ ಸಮುದಾಯ ಭಯದ ವಾತಾವರಣೆಯಲ್ಲಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.ಸರಕಾರ ಕೂಡಲೇ ಇಂತವರ ವಿರುದ್ದ ಕಠಿಣವಾದ ಶಿಕ್ಷೆಯನ್ನು ನೀಡುವುದರ ಮೂಲಕ ಶಿಕ್ಷಕಿಗೆ ನ್ಯಾಯ ಒದಗಿಸಿ ಕೊಡುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.