ಸುಮಾರು 65 ವರ್ಷಗಳಿಂದ ರೋಟರಿ ಸಂಸ್ಥೆ ಸತತ ಸಮಾಜ ಸೇವೆ: ಶಹಾ
ಜಮಖಂಡಿ 09: ರೋಟರಿ ಸಂಸ್ಥೆಯು ಜಮಖಂಡಿಯಲ್ಲಿ ಸುಮಾರು 65 ವರ್ಷಗಳ ಕಾಲ ಸತತವಾಗಿ ಸಮಾಜ ಮುಖಿಯಾಗಿ ಸೇವೆ ಸಲಿಸುತ್ತಾ ಬಂದಿರುವ ಸಂಸ್ಥೆಯಾಗಿದೆ ಎಂದು ಅಸಿಸ್ಟೆಂಟ್ ಗವರ್ನರ್ ಶಹರ್ಷ ಶಹಾ ಹೇಳಿದರು. ನಗರದ ಹೊರವಲಯದ ವಿಜಯಪುರ ರಸ್ತೆಯಲ್ಲಿರುವ ರೋಟರಿ ಸಂಸ್ಥೆಯ ಭವನದಲ್ಲಿ ನಡೆದ 65ನೇ ರೋಟರಿ ಸ್ಥಾಪನ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಯಾವುದೇ ಅಪೇಕ್ಷೆವಿಲ್ಲದೆ ಸ್ವಂತ ಹಣ ಖರ್ಚು ಮಾಡಿ ಸಾಮಾಜಿಕ ಸೇವೆ ಮಾಡುವ ಏಕೈಕ ಸಂಸ್ಥೆ ರೋಟರಿ ಆಗಿದೆ. ಬಹಳ ವರ್ಷಗಳ ಕಾಲ ನಮ್ಮದೇ ಆದಂತಹ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದೆ. ಬಹಳ ಅನುಭವ ಸದಸ್ಯರ ಒಳಗೊಂಡಿರುವ ಸಂಸ್ಥೆಯಾಗಿದೆ. ಇನ್ನು ಅನೇಕ ಜನರು ಸಂಸ್ಥೆಯಲ್ಲಿ ಹೊಸದಾಗಿ ಸೇರೆ್ಡಯಾಗಿ ತಮ್ಮದೇ ಆದಂತಹ ಕೊಡುಗೆಯನ್ನು ನೀಡಬೇಕು ಎಂದರು. ಅಸಿಸ್ಟೆಂಟ್ ಗವರ್ನರ್ ಆರ್, ಪಿ, ನ್ಯಾಮಗೌಡ ಮಾತನಾಡಿ, 1905ರಲ್ಲಿ ಪಾಲ್ ಹ್ಯಾರಿಸ್ ಅವರು ಹವ್ಯಾಸಕ್ಕಾಗಿ, ಇನ್ನೊಬ್ಬರ ವೃತ್ತಿಯನ್ನು ತಿಳಿದುಕೊಳ್ಳುವ ಸಲುವಾಗಿ ನಾಲ್ಕು ಜನರು ಸೇರಿಕೊಂಡು ಸಂಸ್ಥೆಯನ್ನು ಕಟ್ಟಿದರು. 1920 ರಲ್ಲಿ ಭಾರತದ ಕಲ್ಕತ್ತಾದಲ್ಲಿ ಪ್ರಾರಂಭಗೊಂಡು ತದನಂತರ ಮುಂಬೈ ಹೀಗೆ ಬೇರೆ ದೇಶಗಳಲ್ಲಿ 535 ಜಿಲ್ಲೆ 3,000 ಕ್ಲಬ್, 14 ಲಕ್ಷ ಸದಸ್ಯರನ್ನು ಒಳಗೊಂಡಿದೆ. ಜಮಖಂಡಿಯಲ್ಲಿ ರೋಟರಿ ಸಂಸ್ಥೆ 1960ರಲ್ಲಿ ಪ್ರಾರಂಭವಾಯಿತು. ಪ್ರತಿ ವರ್ಷ ಹನ್ನೆರಡು ಕಾರ್ಯಕ್ರಮಗಳು ಮಾಡುತ್ತಾ ಬಂದಿದೆ. ಪೋಲಿಯೋ ನಿರ್ಮೂಲನೆ, ಶಿಕ್ಷಣ ಆರೋಗ್ಯ, ಸಾಮಾಜಿಕ ಸೇವೆ, ಕೌಶಲ್ಯಯುಳ್ಳವರನ್ನು ಗುರುತಿಸಿ ಸನ್ಮಾನಿಸುವುದು. ಹೀಗೆ ಅನೇಕ ಕಾರ್ಯಕ್ರಮಗಳು ಮಾಡುತ್ತಾ ಬಂದಿದೆ ಎಂದರು. ಓಲೇಮಠದ ಆನಂದ ದೇವರು ಆಶೀರ್ವಚನ ನೀಡಿದರು. ಲಯನ್ಸ ಸಂಸ್ಥೆ ಅಧ್ಯಕ್ಷ ಚಿನ್ಮಯ ಜಿರಲಿ, ರೋಟರಿ ರಾಮ್ ತೀರ್ಥ ಸಂಸ್ಥೆ ಅಧ್ಯಕ್ಷ ಕಿರಣ ಜಾಲಿಹಾಳ, ಇನ್ನರ್ವಿಲ್ ಸಂಸ್ಥೆ ಅಧ್ಯಕ್ಷೆ ಅಲ್ಕಾ ಮಾಳಗಿ, ಶಂಕರ ಪಟ್ಟಣಶೆಟ್ಟಿ ,ಡಾ,ಆರ್, ವಿ, ಮೆಟಗುಡ, ರಾಜು ಕೋವಳ್ಳಿ, ಪ್ರವೀಣ ಜಾಡ , ಡಾ.ಕೆ.ಐ ಗುರುಮಠ, ಎಸ್ ವೈ ಬಿರಾದಾರ, ಪ್ರಕಾಶ ಶಿಂಧೆ, ಜಿ.ಬಿ ಕೌಜಲಗಿ, ಗೋಪಾಲಕೃಷ್ಣ ಪ್ರಭು, ಸುಭಾಸ ಕಾಸಿದ, ಕಡ್ಲಿಮಟ್ಟಿ ಧರ್ಮದಾಸನಿ, ಶಂಕರ ತೇಲಿ, ಶ್ರೀಶೈಲ ತೇಲಿ, ಆರ್, ಎಸ್, ಬಿರಾದರ, ಚನ್ನಪ್ಪ ಬಿರಾದರ ಸೇರಿದಂತೆ ಅನೇಕರು ಇದ್ದರು. ಕಿರಣಕುಮಾರ ದೇಸಾಯಿ ಸ್ವಾಗತಿಸಿದರು, ಭಾವನಾ ಬೆಳಗಲಿ ಹಾಗೂ ತ್ರಿಶಾ ಬುಜರುಕ ಪ್ರಾರ್ಥಿಸಿದರು. ಮಲ್ಲಪ್ಪ ಬುಜರುಕ ವಂದಿಸಿದರು. ಕಾರ್ಯಕ್ರಮವನ್ನು ಪ್ರಕಾಶ ಗೌಡರ, ಶಶಿಧರ ಕಡಿಬಾಗಿಲ ನಿರೂಪಿಸಿದರು. ವಿಶ್ವ ಶಾಂತಿಗಾಗಿ ಮೌನಾಚರಣೆ, ಒಂದೇ ಮಾತರಂ ಗೀತೆ, ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.