ಮೂಲಭೂತ ಸೌಲಭ್ಯ ಒದಗಿಸಲು ನಗರಸಭೆ ಅಧ್ಯಕ್ಷರಿಗೆ ಮನವಿ
Request to Municipal Chairman to provide basic facilities
ಮೂಲಭೂತ ಸೌಲಭ್ಯ ಒದಗಿಸಲು ನಗರಸಭೆ ಅಧ್ಯಕ್ಷರಿಗೆ ಮನವಿ
ಹಾವೇರಿ 13: ನಗರದ ಹೃದಯ ಭಾಗದಲ್ಲಿರುವ ಕೂಲಿಕಾರ ಓಣಿಯ 17 ಹಾಗೂ 12ನೇ ವಾರ್ಡಗಳು ಈ ಓಣಿಗೆ ಸಂಬಂಧ ವಿರುತ್ತದೆ. ಪಕ್ಕದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಪುಸ್ಟಳಿ ಸಹ ಇರುತ್ತದೆ ಹಾಗೂ ರೈಲ್ವೇ ಸ್ಟೇಷನಗೆ ಹೋಗುವ ದಾರಿ ಸಹ ಇರುತ್ತದೆ. ಸದರಿಯ ವಾರ್ಡ 12ನೇ ವಾರ್ಡ ಹಾಗೂ 17ನೇ ವಾರ್ಡನಲ್ಲಿ ಬರುತ್ತದೆ.
ಈ ವಾರ್ಡನಲ್ಲಿ ಎರಡು ಕಡೆ ಗಟಾರಗಳು ಹಾಗೂ ರಸ್ತೆಗಳು ಮಾಡಬೇಕು ಹಾಗೂ ಬೀದಿ ದ್ವೀಪಗಳನ್ನು ಅಳವಡಿಸಬೇಕು. ಗುತ್ತಿಗೆದಾರರು ಹಾಗೂ ಓಣಿಯ ಮೆಂಬರ್ ತರಾ-ತುರಿಯಲ್ಲಿ ಒಂದು, ಓಣಿಯ ಒಂದು ಕಡೆ ಗಟಾರಗಳನ್ನು ಮಾಡುತ್ತಿದ್ದಾರೆ. ಆದರಿಂದ ಓಣಿಯ ಒಂದು ಗಟಾರು ನಿರ್ಮಿಸಿದರೆ ಇನ್ನೊಂದು ಕಡೆ ಗಟಾರು ಹಳೆಯದಾಗಿರುತ್ತದೆ ಮತ್ತು ರಸ್ತೆಗಳು ಹಾಳಾಗಿದ್ದು ಇದರಿಂದ ಮಳೆಗಾಲದಲ್ಲಿ ಈ ಓಣಿಯ ನಿವಾಸಿಗಳ ಪ್ರಾಣ ಕೈಯಲ್ಲಿ ಇಟ್ಟು ಕೊಂಡು ಜೀವನ ಮಾಡುತ್ತಿದ್ದಾರೆ. ಆದಕಾರಣ ತಾವುಗಳು 2 ಬಾಗದಲ್ಲಿ ಗಟಾರು ನಿರ್ಮಿಸಬೇಕು. ಮೊತ್ತಮ್ಮೆ ಟೆಂಡರ ಕರೆದು 2 ಕಡೆ ಗಟಾರಗಳು, ರಸ್ತೆಗಳು ಹಾಗೂ ಬೀದಿ ದ್ವಿಪಗಳು ಅಳವಡಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ರಶೀದ ಅಹ್ಮದ ಹುಲಗೂರ ನಗರಸಭೆ ಅಧ್ಯಕ್ಷರಾದ ಶಶಿಕಲಾ ಮಾಳಗಿರವರಿಗೆ ಮನವಿ ನೀಡಿದ್ದಾರೆ.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 