ಕಲ್ಲೇಶ್ವರ ಅಜ್ಜನವರ ಪುಣ್ಯರಾಧನೆ ಅಂಗವಾಗಿ ರಥಯಾತ್ರೆ- ಬೈಕ್ರ್ಯಾಲಿ: ಬೆಡಸಗಾವ್ ತಪೋಭೂಮಿಗೆ ಭಕ್ತರ ಭೇಟಿ!
Rath Yatra-Bike Rally as part of the puja of Kalleshwara Ajjan: Devotees visit Bedasagaon Tapobhoom
ಲೋಕದರ್ಶನ ವರದಿ
ಮುಂಡಗೋಡ 08 : ಶ್ರೀ ಸದ್ಗುರು ಅವಧೂತ ಕಲ್ಲೇಶ್ವರ ಮಹಾಸ್ವಾಮಿಗಳ ಪುಣ್ಯರಾಧನೆ ಕಾರ್ಯಕ್ರಮದ ಅಂಗವಾಗಿ ಕಲ್ಲೇಶ್ವರ ಅಜ್ಜನವರ ರಥಯಾತ್ರೆ ಹಾಗೂ ಸದ್ಭಕ್ತರ ಬೈಕ್ ರ್ಯಾಲಿ ಭಾನುವಾರ ಮಧ್ಯಾಹ್ನ ಬೇಡಸಗಾಂವ ಗ್ರಾಮಕ್ಕೆ ಆಗಮಿಸಿತು. ಬನವಾಸಿಯ ಮಧುಕೇಶ್ವರ ದೇವಸ್ಥಾನದಿಂದ ಆರಂಭವಾದ ಈ ಬೈಕ್ ರ್ಯಾಲಿ ಗುಡ್ನಾಪೂರ ಮಾರ್ಗವಾಗಿ ಕೊರ್ಲಕಟ್ಟಾ, ಬೀಳೂರ, ಬಿಸಲಕೊಪ್ಪ ಮೂಲಕ ಬೇಡಸಾಗಾಂವ ತಲುಪಿತು. ಈ ವೇಳೆ ಭಕ್ತರು ಬೆಡಸಗಾವ್ನ ರಾಮಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಕಲ್ಲೇಶ್ವರ ಮಹಾಸ್ವಾಮೀಜಿಗಳ ತಪೋಭೂಮಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಅನ್ನಪ್ರಸಾದವನ್ನು ಸ್ವೀಕರಿಸಿದರು.
ಮಾರ್ಚ್ 19, 2026ರಂದು ನಡೆಯಲಿರುವ ಕಲ್ಲೇಶ್ವರ ಗುರುಮಠದ ಜಾತ್ರಾ ಮಹೋತ್ಸವಕ್ಕೆ ಭಕ್ತರನ್ನು ಆಹ್ವಾನಿಸುವ ಉದ್ದೇಶದಿಂದ ಈ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು. ಬೇಡಸಗಾಂವ ಪ್ರವೇಶಿಸಿದ ಬಳಿಕ ರ್ಯಾಲಿ ತೋಗರಳ್ಳಿ, ಕುರ್ಲಿ, ಮಳಗಿ ಮಾರ್ಗವಾಗಿ ಸಿರಸಿ ತಾಲೂಕಿನ ಗುರುಮಠ ಅಂಡಗಿ ಮಠದವರೆಗೆ ಸಾಗಲಿದೆ. ಬೆಡಸಗಾಂವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತೀಶ್ ನಾಯ್ಕ್ ಉಮ್ಮುಡಿ, ಶಶಿ ಉಮ್ಮುಡಿ, ಉಮಾಕಾಂತ್ ನಾಯ್ಕ್ ಕುಪ್ಪಳ್ಳಿ, ವಿಧ್ಯಾಧರ ಮಾಳಂಜಿ, ಚಂದ್ರು ಮರಗುಂಡಿ, ಸುನಿಲ್ ಅಂಡಗಿ, ಸಂತೋಷ್ ಬಿಳೂರು, ಜನಾರ್ಧನ್ ಕಲಕರಡಿ, ಹರೀಶ್ ಕಂಡ್ರಾಜಿ, ಪವನ್ ಮತ್ತಿಹಳ್ಳಿ, ರಘುಪತಿ ಭಾಶಿ, ಸುರೇಶ್ ಕ್ಯಾದಗಿಕೊಪ್ಪ, ಮಹೇಶ್ ನಾಯ್ಕ್ ಕಾಂಡ್ರಾಜಿ (ವಕೀಲರು), ಗಣೇಶ್ ನಾಯ್ಕ್ ಮಳಲಗಾಂವ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 