ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ರಕ್ಷಾ ಬಂಧನ ಆಚರಣೆ

ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ರಕ್ಷಾ ಬಂಧನ ಆಚರಣೆ  Raksha Bandhan celebration at Ghanmatheshwar Educational Institute

ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ರಕ್ಷಾ ಬಂಧನ ಆಚರಣೆ  

ತಾಳಿಕೋಟೆ 10:  ಪಟ್ಟಣದ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ರಕ್ಷಾ ಬಂಧನ ನಿಮಿತ್ಯ  ಸೋಮವಾರ 9ರಂದು ಆಚರಿಸಲಾಯಿತು.  

ಸಂಸ್ಥೆಯ ಅಧ್ಯಕ್ಷ ಎಸ್‌.ಎಂ.ಸಜ್ಜನ ಅವರು ಮಾತನಾಡಿ ಶ್ರಾವಣ ಮಾಸದ ಪೂರಣಾ ತಿಥಿಯಂದು ನಡೆಯುವ ರಕ್ಷಾ ಬಂಧನವು ಸಹೋದರಿಯು ತಮ್ಮ ಸಹೋದರನಿಗೆ ಉತ್ತಮ ಆರೋಗ್ಯ, ಅಭಿವೃದ್ಧಿ ಹಾಗೂ ಯಶಸ್ಸು ಬೇಕು ಎಂಬ ಹಾರೈಕೆಯನ್ನು ವ್ಯಕ್ತಪಡಿಸುವ ಅವಕಾಶವಾಗಿದೆ. ಅದರ ಜೊತೆಗೆ, ಸಹೋದರರು ತಮ್ಮ ಸಹೋದರಿಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವ ಪ್ರತಿಜ್ಞೆ ಮಾಡುತ್ತಾರೆ. ಭಾರತದ ಪರಂಪರೆಯಲ್ಲಿ ಹೆಚ್ಚು ಗೌರವವಾದ ಹಬ್ಬವಾದ ರಕ್ಷಾ ಬಂಧನ, ಸಹೋದರಿಯು ತಮ್ಮ ಸಹೋದರನಿಗೆ ರಕ್ಷಾ ಬಂಧನದ ತಂತಿ (ರಾಖಿ) ಹಚ್ಚುವ ಮೂಲಕ ಪ್ರೀತಿಯ ಮತ್ತು ರಕ್ಷಣೆಯ ಸಂಬಂಧವನ್ನು ಹಬ್ಬಿಸುತ್ತದೆ  

ಎಲ್ಲಾ ಮಕ್ಕಳು ರಾಖಿ ಕಟ್ಟುವ ಮೂಲಕ ಹಬ್ಬವನ್ನು ಆಚರಿಸಿದರು. ಸಂಸ್ಥೆಯ ಕಾಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರು ಬಿ.ಜಿ.ಸಜ್ಜನ, ಆರ್‌.ಎಸ್‌.ದೇಸಾಯಿ, ದೈಹಿಕ ಶಿಕ್ಷಕ ಶಿವಾನಂದ ಸುಣದಳ್ಳಿ, ಪಿಯು ಕಾಲೇಜ್ ಪ್ರಾಚಾಯ ಕಿಶೋರಗೌಡ, ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯ ಜಿ.ಎನ್‌.ಪಾಟೀಲ, ಆಯ್‌.ಟಿ.ಆಯ್‌.ಕಾಲೇಜ್ ರಾಜು ಹಜೇರಿ, ಸವ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು