ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಸಭಾಪತಿಯಾಗಿ ರಾಜೀವ ಶೆಟ್ಟಿ, ಉಪಸಭಾಪತಿಯಾಗಿ ಕೊಪ್ಪಳದ ಶ್ರೀನಿವಾಸ ಹ್ಯಾಟಿ ಆಯ್ಕೆ
Rajeev Shetty elected as Chairman of Indian Red Cross Society, Srinivas Hatty of Koppal elected as
ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಸಭಾಪತಿಯಾಗಿ ರಾಜೀವ ಶೆಟ್ಟಿ, ಉಪಸಭಾಪತಿಯಾಗಿ ಕೊಪ್ಪಳದ ಶ್ರೀನಿವಾಸ ಹ್ಯಾಟಿ ಆಯ್ಕೆ
ಕೊಪ್ಪಳ 01: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬೆಂಗಳೂರು ರಾಜ್ಯಶಾಖೆಗೆ ಮೂರು ವರ್ಷಗಳ ಅವಧಿಗೆ ಸಭಾಪತಿ ಹಾಗೂ ಉಪಸಭಾಪತಿ ಹುದ್ದೆಗೆ ಮಂಗಳವಾರ ರೆಡ್ ಕ್ರಾಸ್ ಸಂಸ್ಥೆ ಕಛೇರಿಯಲ್ಲಿ ಚುನಾವಣೆ ಜರುಗಿತು. ಚುನಾವಣೆಯಲ್ಲಿ ಸಭಾಪತಿಯಾಗಿ ಉಡುಪಿ ಶಾಖೆಯ ರಾಜೀವ ಶೆಟ್ಟಿ ಹಾಗೂ ಉಪಸಭಾಪತಿಯಾಗಿ ಕೊಪ್ಪಳ ಶಾಖೆಯ ಡಾ. ಶ್ರೀನಿವಾಸ ಹ್ಯಾಟಿ ಆಯ್ಕೆಯಾಗಿದ್ದಾರೆ.ಸಭಾಪತಿ ಹುದ್ದೆಗೆ ಮೂರು ಜನ ಆಕಾಂಕ್ಷಿಗಳು ಸ್ಪರ್ಧಿಸಿದ್ದರು. ಉಪ ಸಭಾಪತಿ ಹುದ್ದೆಗೆ ಇಬ್ಬರು ಸ್ಪರ್ಧಿಸಿದ್ದರು. ಒಟ್ಟು 30 ಸದಸ್ಯರು ತಮ್ಮ ಮತ ಚಲಾಯಿಸಿದರು. ಅದರಲ್ಲಿ ಸಭಾಪತಿ ಆಯ್ಕೆಯಲ್ಲಿ ಬಾಗಲಕೋಟೆ ಶಾಖೆಯ ಆನಂದ ಜಿಗಜಿನ್ನಿ, ಶಿವಮೊಗ್ಗ ಶಾಖೆಯ ಎಸ್.ಪಿ. ದಿನೇಶ ಹಾಗೂ ಉಡುಪಿ ಶಾಖೆಯ ಬಸ್ರೂರು ರಾಜೀವ ಶೆಟ್ಟಿ ಈ ಮೂರು ಜನರೂ ತಲಾ 10 ಮತಗಳನ್ನು ಪಡೆದರು. ಇದರಲ್ಲಿ ಕೊನೆಗೆ ಚೀಟಿ ಎತ್ತಿದಾಗ ಉಡುಪಿ ಶಾಖೆಯ ಬಸ್ರೂರು ರಾಜೀವ ಶೆಟ್ಟಿ ಸಭಾಪತಿಯಾಗಿ ಆಯ್ಕೆಯಾದರು.ಉಪ ಸಭಾಪತಿಗೆ ಇಬ್ಬರು ಸ್ಪರ್ಧಿಸಿದ್ದರು. ಇದರಲ್ಲಿ ಬಳ್ಳಾರಿಯ ಎಂ.ಎ. ಶಕೀಬ್ 11 ಮತಗಳನ್ನು ಪಡೆದರೆ, ಕೊಪ್ಪಳ ಶಾಖೆಯ ಡಾ.ಶ್ರೀನಿವಾಸ ಹ್ಯಾಟಿ 19 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ಡಾ.ಶ್ರೀನಿವಾಸ ಹ್ಯಾಟಿ ಇವರ ಆಯ್ಕೆಗೆ ಕೊಪ್ಪಳ ಭಾರತೀಯ ರೆಡ್ ಕ್ರಾಸ್ ಪದಾಧಿಕಾರಿಗಳು, ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದಾರೆ.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 