ಅರ್ಎಸ್ ಎಸ್ ಪಥ ಸಂಚಲನ : ಭಾರತೀಯತೆ ಬಿಂಬಿಸಿದ ಗಣವೇಶಧಾರಿಗಳು
RSS roadshow: Ganesh wearers portray Indian identity
ಅರ್ಎಸ್ ಎಸ್ ಪಥ ಸಂಚಲನ : ಭಾರತೀಯತೆ ಬಿಂಬಿಸಿದ ಗಣವೇಶಧಾರಿಗಳು
ರಾಣೆಬೆನ್ನೂರು: 27 ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರು ವರ್ಷಗಳ ಆಕರ್ಷಕ ಪಥ ಸಂಚಲನವು ಅತ್ಯಂತ ಭಕ್ತಿ ಭಾವದೊಂದಿಗೆ ಅದ್ದೂರಿಯಾಗಿ ಜರುಗಿತು. ಭಾರತ ಮತ್ತು ಸಂಸ್ಕೃತಿ ಕುರಿತಂತೆ ಆರ್ ಎಸ್ ಎಸ್ ಅಂತರ ರಾಜ್ಯಗಳ ಸಂಚಾಲಕ ಶ್ರೀಧರ ಸ್ವಾಮಿ, ತಮ್ಮ ಬೌದ್ಧಿಕ ಮಾತನಾಡಿದರು. ಸಂಘ ನಗರ ಸಹ ಕಾರ್ಯವಾಹ ಜಗದೀಶ್ ಪ್ರಜಾಪಥ್, ನಗರ ಸಂಘಚಾಲಕ ಯುವರಾಜ ಬ್ಯಾಡಗಿ, ಮಾಜಿ ಶಾಸಕ ಅರುಣಕುಮಾರ ಪೂಜಾರ, ನಗರ ಕಾರ್ಯಕಾರಿಣಿ ಸದಸ್ಯ ವಿನಾಯಕ ಜೋಶಿ, ಆರ್ ಎಸ್ ಎಸ್ ಮುಖಂಡರಾದ ಈಶ್ವರ್ ಹಾವನೂರ, ಗವಿಸಿದ್ದಪ್ಪ ದ್ಯಾಮಣ್ಣನವರ, ಆರ್. ಟಿ. ತಾಂಬೆ, ಶ್ರೀನಿವಾಸ ನಾಡಿಗೇರ, ಮಂಜಯ್ಯ ಚಾವಡಿ,ಪೃಥ್ವಿರಾಜ್ ಜೈನ್, ಪ್ರಕಾಶ ಬುರುಡಿಕಟ್ಟಿ,ಶ್ರೀನಿವಾಸ ಏಕ ಬೋಟೆ, ಜಿ.ಜಿ. ಹೊಟ್ಟಿಗೌಡ್ರು, ಕೆ.ಶಿವಲಿಂಗಪ್ಪ, ಡಾ, ಸಂಜಯ್ ನಾಯ್ಕ್ ಎ. ಬಿ ಪಾಟೀಲ್, ಪಾಂಡುರಂಗ ಪೂಜಾರ್, ಪವನ್ ಮಲ್ಲಾಡದ, ಸತೀಶ ಹೊಳೆಬಾಗಿಲ,ಸಂಜೀವ್ ಶಿರಹಟ್ಟಿ, ಅಜಯ್ ಮಠದ, ಭೋಜರಾಜ ದಲಬಂಜನ್, ದತ್ತಾತ್ರೆಯ ರೇವಣಕರ್, ಮಂಜುನಾಥ ಗೌಡ ಶಿವಣ್ಣನವರ, ಗುರುರಾಜ ಕುಲಕರ್ಣಿ, ಅಶೋಕ ನಾಡಗೇರ,ಅಮೋಘ ಬಾದಾಮಿ, ಚಂದ್ರು ಕೊರಗರ, ಕೈಲಾಸ್ ಮತ್ತು ಜಗದೀಶ್ ಪ್ರಜಾಪಥ್, ರಾಘವೇಂದ್ರ ದುಂಡಿ, ನಾಗರಾಜ ಮಜ್ಜಿಗಿ, ಗೀರೀಶ್ ಮಜ್ಜಿಗಿ ಮಂಜುನಾಥ ಕಾಟಿ, ಸುಭಾಸ ಸಿರಿಗೇರಿ, ಶ್ರೀಕಾಂತ ಹುಲ್ಮನಿ, ಕೆ ಎನ್ ಷಣ್ಮುಖ, ಸೇರಿದಂತೆ ಆರ್. ಎಸ್ ಎಸ್ ಮುಖಂಡರು,ಸಾವಿರಕ್ಕೂ ಹೆಚ್ಚು ಗಣವೇಶಧಾರಿಗಳು ಪಾಲ್ಗೊಂಡಿದ್ದರು ಪಥ ಸಂಚಲನದುದ್ದಕ್ಕೂ, ನಾಗರಿಕರು, ತಳಿರು ತೋರಣಕಟ್ಟೆ, ರಂಗೋಲಿ ಚಿತ್ತಾರಗಳನ್ನು ಬಿಡಿಸಿ, ಪುಷ್ಪವನ್ನು ಸಮರ್ಿಸುವುದರ ಮೂಲಕ, ಅತ್ಯಂತ ಭಕ್ತಿ ಭಾವದೊಂದಿಗೆ ಸ್ವಾಗತ ಕೋರುವ ದೃಶ್ಯವು ಎಲ್ಲೆಡೆಯೂ ಕಾಣುವುದು ಸಾಮಾನ್ಯವಾಗಿತ್ತು. ಅಶೋಕ ವೃತ್ತದಿಂದ ಆರಂಭವಾದ ಗಣವೇಶಧಾರಿಗಳ ಪಥ ಸಂಚಲನವು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸಂಜೆ ನಗರ ಸಭೆ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಮಾರಂಭದೊಂದಿಗೆ ಸಾಂಗ ತ್ಯಗೊಂಡಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ, ಸಿಪಿಐ ಜೆ. ಲೋಕೇಶ್, ಪಿಎಸ್ಐ ಗಡ್ಡೆಪ್ಪ ಗುಂಜುಟಿಗಿ, ಸೇರಿದಂತೆ ಇಲಾಖೆಯ ಇತರರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಗೊಳಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 