ಅಧಿಕಾರಿಗಳ ಧೋರಣೆ ಖಂಡಿಸಿ ವಿರುದ್ಧ ಜನತಾ ಕಾಲೋನಿ ಜನಾಕ್ರೋಶ
Public outcry in Janata Colony against the attitude of the officials
ಅಧಿಕಾರಿಗಳ ಧೋರಣೆ ಖಂಡಿಸಿ ವಿರುದ್ಧ ಜನತಾ ಕಾಲೋನಿ ಜನಾಕ್ರೋಶ
ಗದಗ 24: ಕಳೆದ 15 ದಿನಗಳಿಂದ ಬಿಟ್ಟು ಬಿಡಲಾರದೆ ಮಳೆ ಆಗುತ್ತಾ ಬಂದಿದೆ. ಗದಗ ಜಿಲ್ಲಾ ಹತ್ತಿರ ಇರುವ ತುಂಗಭದ್ರಾ ಚೆಕ್ ಡ್ಯಾಂ ಭರ್ತಿ ಆಗಿದ್ದು. ಆದರೆ ಗದಗ ನಗರದ ಕುಡಿಯುವ ನೀರಿಗಾಗಿ ಸಾಕಷ್ಟು ಯೋಜನೆಗಳನ್ನು ತಂದರೂ ಕೂಡ ಗದಗ ನಗರಕ್ಕೆ ನೀರು ಬರೆದ ಇರುವುದೇ ದುರದೃಷ್ಟ ಆಗಿದೆ ಈಗ ಗದಗ ನಗರದ ವಾರ್ಡ ನಂ 16 ರ ಹೊಂಬಳನಾಕಾ ಜನತಾ ಕಾಲೋನಿಗೆ ಕಳೆದ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ನಗರಸಭೆ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಒದಗಿಸುತ್ತಿಲ್ಲ ಹಾಗೂ ನಮ್ಮ ಹೊಂಬಳನಾಕಾ ಜನತಾ ಕಾಲೋನಿಯು ನಗರಸಭೆಗೆ ಸಂಬಂಧವೇ ಇಲ್ಲ ಅನ್ನೂವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೊಂಬಳನಾಕಾ ಜನತಾ ಕಾಲೋನಿಯ ಸಾರ್ವಜನಿಕರು ಇಡೀ ಶಾಪ ಹಾಕುತ್ತಾ ಇದ್ದಾರೆ.
ಅಧಿಕಾರಿಗಳ ಬೇಜವಾಬ್ದಾರಿ ಧೋರಣೆ ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಂಬಳನಾಕಾ ಜನತಾ ಕಾಲೋನಿಯು ಸ್ಲಂ ಪ್ರದೇಶವಾಗಿದ್ದು 40 ವರ್ಷ ಕಳೆದರು ಯಾವದೇ ರೀತಿಯ ಅಭಿವೃದ್ಧಿ ಕಾಮಗಾರಿಯ ಭಾಗ್ಯ ಕಾಣದೆ ಪ್ರಾಣಿಗಳು ವಾಸ ಮಾಡುತ್ತಿರುವ ಕಾಡಿನಂತಾಗಿ ವರಿವರ್ಥನೆಯಾಗಿದೆ ಇಂತಹ ಕೇಟ್ಟ ಪರಿಸ್ತಿತಿಯಲ್ಲಿರುವ ಈ ಬಾಗದ ಜನರು ಅತ್ಯಂತ ಕಡಬಡುವರಾಗಿದ್ದು 200.ರೂ 300.ರೂಪಾಯಿಗಳಿಗೆ ದಿನಪೂರ್ತಿ ದುಡಿಯುವಂತಹ ಓಣಿಯ ಸಾವಿರಾರು ಬಡ ಕೂಲಿ ಕಾರ್ಮಿಕರೇ ಹೆಚ್ಚಿರುವ ವಾರ್ಡ ನಂ 16 ರ ಹೊಂಬಳನಾಕಾ ಜನತಾ ಕಾಲೋನಿಯಲ್ಲಿ ಕುಡಿಯುವ ನೀರಿಗೆ ಬರ ಬಂದಿದೆ. ಎಂದು ಕೃಷ್ಣಾ ಎಚ್ ಹಡಪದ ಬೇಸರ ಹಾಗೂ ನೊವಿನಿಂದ ಹೆಳಿದ ಅವರು ಶಾಲೆಗೆ ಛಜಟಚಿರಟಿಛಿಣಡಿಥಿಠಚಿಥಿಚಿಅರಟಚಿಟ.ಛಿಠ ರಜಾ ಹಾಕಿ ಮಕ್ಕಳು. ಕೂಲಿ ಕೆಲಸ ಬಿಟ್ಟು ಮಹಿಳೆಯರು ಪುರುಷರು ಬೆಳಗ್ಗೆ ಎದ್ದು ಜಲ ಮೂಲ ಹುಡುಕಿಕೊಂಡು ಹೋಗಬೇಕಾದ ದುಸ್ಥಿತಿ ನಮ್ಮ ಓಣಿಯಲ್ಲಿ ಎದುರಾಗಿದೆ. ಹಾಗಾಗಿ ಕೂಡಲೇ ಗದಗ ವಾರ್ಡ ನಂ 16 ರ ಹೊಂಬಳನಾಕಾ ಜನತಾ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ನಗರಸಭೆ ಅಧೀಕಾರಿಗಳು ಪರಿಹಾರ ಒದಗಿಸದಿದ್ದರೇ ಹೋರಟ ಅನಿವಾರ್ಯ ಎನ್ನುತ್ತೀದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 