ಅಪಸ್ಮಾರ ಮೂರ್ಛೆರೋಗದ ಬಗ್ಗೆ ಜನಜಾಗೃತಿ ಅಗತ್ಯ

ಅಪಸ್ಮಾರ ಮೂರ್ಛೆರೋಗದ ಬಗ್ಗೆ  ಜನಜಾಗೃತಿ ಅಗತ್ಯ Public awareness about epilepsy is needed


ವಿಜಯಪುರ, ಫೆ,10  : ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿಗಳಾದ ಡಾ. ಅರ್ಚನಾ ಕುಲಕರ್ಣಿ ಅವರು ಮಾತನಾಡಿ, ಅಪಸ್ಮಾರ ಮೂರ್ಛೆರೋಗ ಕುರಿತು ಸಮಾಜದಲ್ಲಿ ಇರುವ ಮೂಢನಂಬಿಕೆ ಹಾಗೂ ತಪ್ಪು ಕಲ್ಪನೆಗಳನ್ನು ದೂರ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ಮೂರ್ಛೆರೋಗದಿಂದ ಬಳಲುವ ವ್ಯಕ್ತಿಯು ಸಾಮಾನ್ಯ ವ್ಯಕ್ತಿಯಂತೆ ಜೀವನ ನಡೆಸಲು ಸಮಾಜದ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದ್ದು, ಅಪಸ್ಮಾರ ರೋಗದ ಬಗ್ಗೆ ಜಾಗೃತಿ ಅಗತ್ಯವಾಗಿದೆ ಎಂದು ಹೇಳಿದರು.  

ಅಂತರಾಷ್ಟ್ರೀಯ ಅಪಸ್ಮಾರ ಮೂರ್ಛೆರೋಗ ದಿನಾಚರಣೆಯ ಅಂಗವಾಗಿ ಸೋಮವಾರ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಜನಜಾಗೃತಿ ಜಾಥಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ಅಪಸ್ಮಾರ ರೋಗಿಗಳು ಮೂರ್ಛೆಗೊಂಡು ಬಿದ್ದಾಗ ಗಾಯವಾಗದಂತೆ, ರೋಗಿಯ ಬಾಯಿಯನ್ನು ಬಲವಂತವಾಗಿ ತೆರೆಯಲು ಯತ್ನಿಸಬಾರದು. ಇದರಿಂದ ಹಲ್ಲುಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಮೂರ್ಛೆಯ ಸ್ಥಿತಿ ಹೆಚ್ಚು ಕಾಲ ಮುಂದುವರಿದರೆ ಅಥವಾ ಮರು ಉಂಟಾದರೆ ತಕ್ಷಣ ವೈದ್ಯರ ನೆರವು ಪಡೆಯಬೇಕು. ಅಪಸ್ಮಾರ ರೋಗಕ್ಕೆ ಉಚಿತ ಚಿಕಿತ್ಸೆ, ಓಷಧಿ ಹಾಗೂ ಆಪ್ತಸಮಾಲೋಚನೆ ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಹೇಳಿದರು. 

  ಈ ಸಂದರ್ಭದಲ್ಲಿ ಡಾ.ಪರಶುರಾಮ ಹಿಟ್ನಳ್ಳಿ, ಡಾ.ಓಂಕಾರ ತದ್ದೇವಾಡಿ, ಮನೋರೋಗ ತಜ್ಞರಾದ ಡಾ. ಮಂಜುನಾಥ ಮಸಳಿಮ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜೆ. ಎಂ. ಕೋಲೂರ, ಬೆಳಗಾವಿ ವಿಭಾಗದ ಸಹನಿರ್ದೇಶಕರಾದ ಸುರೇಶ ಹೊಸಮನಿ, ಜಿಲ್ಲಾ ಸಂಯೋಜಕರಾದ ಆನಂದ ರಾಠೋಡ, ಕ್ಲಿನಿಕಲ್ ಸೈಕಾಲಜಿಸ್ಟ್‌ ಕೆ. ಬಿ. ಬಾಗವಾನ ಸೇರಿದಂತೆ ಆಶಾ ಕಾರ್ಯಕರ್ತೆಯರು, ವಿವಿಧ ನಸಿಂರ್ಗ್ ಕಾಲೇಜುಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಮತ್ತು ಜಿಲ್ಲಾ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದ ಸಿಬ್ಬಂದಿಗಳು  ಮತ್ತಿತರರು ಉಪಸ್ಥಿತರಿದ್ದರು. 


Dental Injury Risk Immediate medical help District Health Education Officer District Karnataka Brain Health Initiative