ಸ್ಲಂ ಜನರ ಭೂಮಿ ಕಿತ್ತುಕೊಳ್ಳುವ ಹುನ್ನಾರ ಆಗ್ರಹಿಸಿ ಪ್ರತಿಭಟನೆ

ಸ್ಲಂ ಜನರ ಭೂಮಿ ಕಿತ್ತುಕೊಳ್ಳುವ ಹುನ್ನಾರ ಆಗ್ರಹಿಸಿ ಪ್ರತಿಭಟನೆ Protest against the plan to snatch land from slum dwellers

ಸ್ಲಂ ಜನರ ಭೂಮಿ ಕಿತ್ತುಕೊಳ್ಳುವ ಹುನ್ನಾರ ಆಗ್ರಹಿಸಿ ಪ್ರತಿಭಟನೆ 

ಗದಗ 11:  ನಗರದಲ್ಲಿಯ ರಿ.ಸ.ನಂ.594 ರಹಮತನಗರ ರಸ್ತೆಯಲ್ಲಿರುವ ನವನಗರ ಸ್ಲಂ ಪ್ರದೇಶದ 78 ಕೊಲಿಕಾರ್ಮಿಕ ಕುಟುಂಬಗಳು 2000 ರಲ್ಲಿ ಭೂ ಮಾಲಿಕನಾದ ದತ್ತಾತ್ರೇಯ ವಾಸುದೇವ ಭಾಂಡೆಗೆ ಅವರಿಂದ ಲಕ್ಷಾಂತರ ಹಣ ಕೊಟ್ಟು ಖರೀದಿ ಮಾಡಿದ್ದಾರೆ. ಸ್ಥಳೀಯ ಜನರು ಕಳೆದ 25 ವರ್ಷಗಳಿಂದ ತಮ್ಮ ನಿವೇಶನಗಳಲ್ಲಿ ಸಣ್ಣ ಪುಟ್ಟ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತ ಬಂದಿದ್ದಾರೆ, ಆದರೆ ಭೂ ಮಾಲಿಕ 78 ಕುಟುಂಬಗಳು ವಾಸವಾಗಿರುವ ಭೂಮಿಯನ್ನು ಭೂ ಮಾಫಿಯಾಗಳ ಮೂಲಕ ಮತ್ತೆ ಮಾರಾಟ ಮಾಡಿ ಸ್ಲಂ ಜನರ ಭೂಮಿಯನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿರುವುದನ್ನು ಖಂಡಿಸಿ ಕೊಡಲೇ ಭೂ ಮಾಲಿಕನನ್ನು ಬಂಧಿಸಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ನೂರಾರು ಜನರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.