ವೃತ್ತಿ ರಂಗಭೂಮಿ ನಟ ರಾಜು ತಾಳಿಕೋಟೆ ರಂಗ ನಮನ
Professional theatre actor Raju Talikote pays tribute to Ranga Namana
ವೃತ್ತಿ ರಂಗಭೂಮಿ ನಟ ರಾಜು ತಾಳಿಕೋಟೆ ರಂಗ ನಮನ
ಹೂವಿನ ಹಡಗಲಿ 14: ಹಾಸ್ಯ ನಟ ವೃತ್ತಿ ರಂಗಭೂಮಿ ದಿಗ್ಗಜ ರಾಜು ತಾಳಿಕೋಟೆ ನಿಧನದಿಂದ ರಂಗಭೂಮಿಗೆ ತುಂಬಲಾರದ ನಷ್ಟ ಎಂದು ರಂಗಭೂಮಿ ಪೋಷಕ ಬೀರಬ್ಬಿ ಬಸವರಾಜ ಹೇಳಿದರು.ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಇಲ್ಲಿನ ರಂಗಭೂಮಿ ಗೆಳೆಯರು ಸಾಹಿತ್ಯಾಸಕ್ತರು ಪತ್ರಕರ್ತರುಒಡನಾಡಿಗಳು ಸಹಯೋಗದಲ್ಲಿ ರಾಜು ತಾಳಿಕೋಟೆ ರಂಗ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಲಿಯುಗದ ಕುಡಕ ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡ ದಾಖಲೆ ನಿರ್ಮಿಸಿದ ನಾಟಕ.ಕುಡುಕನ ಪಾತ್ರ ಕ್ಯಾಸೆಟ್ ರಾಜು ತಾಳಿಕೋಟೆ ರವರಿಗೆ ಬಹಳಷ್ಟು ಹೆಸರು ತಂದು ಕೊಟ್ಟಿತ್ತು ಎಂದು ತಿಳಿಸಿದರು.ವೃತ್ತಿ ರಂಗಭೂಮಿ ನಾಟಕ ಕಂಪನಿಗಳು ಸಾಕಷ್ಟು ನಷ್ಟ ಏಳು ಬೀಳುಗಳ ನಡುವೆ ಜನರಿಗೆ ಮನರಂಜನೆ ನೀಡುವ ಪರಂಪರೆ ಮುಂದುವರೆಸಿವೆ ಎಂದು ಹೇಳಿದರು.ಕನ್ನಡ ಜಾಗೃತಿ ಸಮಿತಿ ಜಿಲ್ಲಾ ಸದಸ್ಯ ಸುರೇಶ ಅಂಗಡಿ ಸಿನಿಮಾಗಳಲ್ಲಿ ಉತ್ತರ ಕನ್ನಡ ಭಾಷೆಯ ಸೊಗಡನ್ನು ಉಣಬಡಿಸಿದ ಅಪರೂಪದ ನಟ ಎಂದು ಬಣ್ಣಿಸಿದರು.ಪತ್ರಕರ್ತರಾದ ಬಿಚ್ಚುಗತ್ತಿ ಖಾಜಾ ಹುಸೇನ್, ಎಂ ದಯಾನಂದ, ದೇವೇಂದ್ರ್ಪ ಎಲ್ ಖಾದರಬಾಷಾ ನಾಗರಾಜ್ ಮಲ್ಕಿಒಡೆಯರ್ ಗಾಯಕ ನಾಗೇಶ್ ರಾಜು ತಾಳಿಕೋಟೆ ರಂಗ ಸೇವೆ ಕುರಿತು ಮಾಹಿತಿ ಹಂಚಿಕೊಂಡರು.ಶಾಖಾ ಗ್ರಂಥಾಲಯಾಧಿಕಾರಿ ಬಿ ನಾರಾಯಣ್, ಎಐಟಿಯುಸಿ ಸುರೇಶ ಹಲಗಿ ಗುರುಸ್ವಾಮಿ ಡಿ ಎಂ ವೀರಯ್ಯ ಸ್ವಾಮಿ, ಸುಭಾಷ್ ಹೊಳಲು ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 