ಪ್ರೀತಮ್ ಘಟ್ಟೆಪ್ಪನವರ ರಾಜ್ಯ ಮಟ್ಟಕ್ಕೆ ಆಯ್ಕೆ

ಪ್ರೀತಮ್ ಘಟ್ಟೆಪ್ಪನವರ ರಾಜ್ಯ ಮಟ್ಟಕ್ಕೆ ಆಯ್ಕೆ Pritam Ghatteppa's selection to the state level

ಮಹಾಲಿಂಗಪುರ 06: ಇತ್ತೀಚಿಗೆ ವಿಜಯಪುರ ಕೃಷಿ ವಿವಿಯ ಕ್ರೀಡಾಂಗಣದಲ್ಲಿ ನಡೆದ ಜರುಗಿದ ಬೆಳಗಾವಿ ಡಿವಿಜನ್ ಹಂತದ ಕ್ರಿಕೆಟ್ ಪಂದ್ಯಾವಳಿಯಲ್ಲಿ 5 ವಿಕೆಟ್ ಮತ್ತು 40ಕ್ಕೂ ಅಧಿಕ ರನ್ ಪಡೆಯುವ ಮೂಲಕ ಆಯ್ಕೆ ಸಮಿತಿಯ ಗಮನ ಸೆಳೆದು ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರೀತಮ್ ಮಹಾಲಿಂಗ ಘಟ್ಟೆಪ್ಪನವರ ರಾಜ್ಯ ಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. 

ಬಾಗಲಕೋಟೆ ಜಿಲ್ಲಾ ತಂಡ ಪ್ರತಿನಿಧಿಸಿದ್ದ ಅವರು, ಲೀಗ್ ಹಂತದಲ್ಲಿ ಧಾರವಾಡ ತಂಡದ ವಿರುದ್ಧ, ಸೆಮಿಫೈನಲ್ ನಲ್ಲಿ ವಿಜಯಪುರ ತಂಡದ ವಿರುದ್ಧ, ಫೈನಲ್ ಪಂದ್ಯದಲ್ಲಿ ಬೆಳಗಾವಿ ತಂಡದ ವಿರುದ್ಧ ಓಪನರ್ ಬ್ಯಾಟರ್ ಆಗಿ ಮತ್ತು ಫಸ್ಟ್‌ ಸ್ಪೆಲ್ ಬೌಲರ್ ಆಗಿ ಕಣಕ್ಕಿಳಿದು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅತ್ತ್ಯುತ್ತಮ ಪ್ರದರ್ಶನದೊಂದಿಗೆ ಗಮನ ಸೆಳೆದು ಆಯ್ಕೆಯಾಗಿದ್ದು, ಸಂಸ್ಥೆಯ ಅಧ್ಯಕ್ಷ ಶಾಂತಿಲಾಲ್ ಪಟೇಲ್, ಉಪಾಧ್ಯಕ್ಷ ಶಿವಾನಂದ ತಿಪ್ಪಾ, ಕಾರ್ಯದರ್ಶಿ ಗುರುರಾಜ ಅಂಬಿ, ನಿರ್ದೇಶಕರಾದ ಈಶ್ವರ ಮುರಗೋಡ, ರಮೇಶ ಮುಳವಾಡ, ರಾಜು ಘಟ್ಟೆಪ್ಪನವರ ಮತ್ತಿತರರು ಅಭಿನಂದಿಸಿದ್ದಾರೆ.