ಅತಿಕ್ರಮಣ ಮಾಡಿಕೊಂಡಿರುವ ಜಾಗಕ್ಕೆ ಪೊಲೀಸ್ ಬಂದೋಬಸ್ತ

ಅತಿಕ್ರಮಣ ಮಾಡಿಕೊಂಡಿರುವ ಜಾಗಕ್ಕೆ ಪೊಲೀಸ್ ಬಂದೋಬಸ್ತ Police cordon off the encroached area

ಅತಿಕ್ರಮಣ ಮಾಡಿಕೊಂಡಿರುವ ಜಾಗಕ್ಕೆ ಪೊಲೀಸ್ ಬಂದೋಬಸ್ತ 

ರಾಯಬಾಗ, 11 ; ತಾಲೂಕಿನ ಚಿಂಚಲಿ ಪಟ್ಟಣದ ಸರ್ಕಾರಿ ಜಾಗ ರಿ.ಸ.ನಂ.400ರಲ್ಲಿ ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿರುವ ಜಾಗವನ್ನು ತಹಶೀಲ್ದಾರ ಸುರೇಶ ಮುಂಜೆ ಅವರ ಸಮ್ಮುಖದಲ್ಲಿ ಪೊಲೀಸ್ ಬಂದೋಬಸ್ತದೊಂದಿಗೆ ಸರ್ವೇ ಇಲಾಖೆಯವರು ಸೋಮವಾರ ಸರ್ವೇ ಕಾರ್ಯ ನಡೆಸಿದರು.  

ಪ.ಪಂ.ಮುಖ್ಯಾಧಿಕಾರಿ ವಿ.ಬಿ.ಬಳ್ಳಾರಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ಉಚ್ಛನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಚಿಂಚಲಿ ಪಟ್ಟಣದ ಪ.ಪಂ.ಆಸ್ತಿ ನಂ.1015/1 (ರಿ.ಸ.ನಂ.400ರ ಕ್ಷೇತ್ರ 2ಎಕರೆ 10ಗುಂಟೆ) ರಲ್ಲಿ ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡರುವ ಸರ್ಕಾರಿ ಜಾಗೆಯನ್ನು ಸೋಮವಾರ ಸರ್ವೇ ಇಲಾಖೆಯವರು ಸರ್ವೇ ಕಾರ್ಯ ಮಾಡಿದ್ದಾರೆ. ಸರ್ವೇ ಇಲಾಖೆಯವರು ಸಲ್ಲಿಸುವ ವರದಿಯನ್ನು ಪಡೆದುಕೊಂಡು, ಮುಂದಿನ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು.