ವೀರ ಅಭಿಮನ್ಯು ಕಾಳಗ ಬಯಲಾಟ ಪ್ರದರ್ಶನಕ್ಕೆ ಜನರ ಮೆಚ್ಚುಗೆ
People appreciate the brave Abhimanyu Kalaga Bayalata performance
ಕಂಪ್ಲಿ 06: ಗ್ರಾಮೀಣ ಪ್ರದೇಶದಲ್ಲಿ ನಾಟಕ, ಬಯಲಾಟ ನಡೆಯುತ್ತಿರುವುದರಿಂದ ಗ್ರಾಮೀಣ ಕಲೆಗಳು ಉಳಿಯುತ್ತಿವೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು. ತಾಲೂಕಿನ ನಂ.10 ಮುದ್ದಾಪುರ ಗ್ರಾಮದಲ್ಲಿ ಚೌಡಮ್ಮದೇವಿ ಜಾತ್ರ ಪ್ರಯುಕ್ತ ಬಸವೇಶ್ವರ ಕೃಪಾಪೋಷಿತ ಕರ್ನಾಟಕ ಬಯಲಾಟ ಮಂಡಳಿ ಹಾಗೂ ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೀರ ಅಭಿಮನ್ಯುಕಾಳಗ ಅಥಾತ್ ಸೈಂಧವನ ವದಾ ಎಂಬ ಸುಂದರರವಾದ ಪೌರಾಣಿಕ ಬಯಲು ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಯುವಕರ ಮೇಲೆ ಸಾಮಾಜಿಕ ಜಾಲತಾಣಗಳು ಹೆಚ್ಚು ಪ್ರಭಾವ ಬೀರಿ ಕಲೆ, ಸಾಹಿತ್ಯದ ಅಭಿರುಚಿ ಕಡಿಮೆಯಾಗುತ್ತಿದೆ ಎಂದರು. ರೈತ ಮುಖಂಡ ಕಟ್ಟೆ ದುರುಗಪ್ಪ ಬಯಲಾಟದ ಅಧ್ಯಕ್ಷತೆವಹಿಸಿದ್ದರು.
ಈ ಸಂದರ್ಭದಲ್ಲಿ ಕಟ್ಟೆ ಮಹಾದೇವ, ಎಚ್.ಎಂ.ಬಸವರಾಜಸ್ವಾಮಿ, ಧನಂಜಯ್ಯ, ಎಂ.ಎಸ್.ವಿರುಪಾಕ್ಷಯ್ಯ, ಕಟ್ಟೆ ಶಂಕರ್, ವಿಜಯಮಹಾಂತೇಶ, ತಾಯಣ್ಣ, ಹೆಚ್.ಸೋಮೇಶ್ವರಿ ಪರಶುರಾಮ, ಜಡೆ ಸಾವಿತ್ರಮ್ಮ ಮಹಾದೇವಪ್ಪ, ಬಳೆ ಮಲ್ಲಿಕಾರ್ಜುನ, ವೈ.ಉಮೇಶ, ಬಂಡಾರಿ ನರಸಪ್ಪ, ಕೆ.ಶಿವರಾಮಪ್ಪ, ಹೋಟಲ್ ಕುಮಾರಸ್ವಾಮಿ ಸೇರಿದಂತೆ ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಭಾಗವಹಿಸಿದ್ದರು. ಪ್ರದರ್ಶನ: ಉಪ್ಪಾರು ಮನೋಜ್(ಬಾಲಕೃಷ್ಣ), ವಾಲ್ಮೀಕಿ ದೊಡ್ಡ ತಿಪ್ಪಯ್ಯ(ಧರ್ಮರಾಯ), ಅಂಗಜಾಲರ ಬಿ.ಹನುಮಂತಪ್ಪ(ಅಭಿಮನ್ಯು), ವಾಲ್ಮೀಕಿ ಓಬಳೇಶ(ಭೀಮಸೇನ), ಗೌಳೇರು ಉಮೇಶ(ದುರ್ಯೋಧನ), ದಮ್ಮೂರು ವೆಂಕಟೇಶ(ದ್ರೋಣ), ವಾಲ್ಮೀಕಿ ಸಣ್ಣ ಲಿಂಗಣ್ಣ(ಕರ್ಣ), ಉಪ್ಪಾರು ರಾಜಶೇಖರ(ಸೈಂಧವ), ಹೆಚ್.ರಮೇಶ(ಕೃಷ್ಣ), ಹೆಚ್.ಕುಮಾರಸ್ವಾಮಿ(ಅರ್ಜುನ), ಉಮಾದೇವಿ(ಉತ್ತರೆ), ಭೋವಿ ಪವಿತ್ರ(ಕನಕಾಂಗಿ), ಕಮಲಮ್ಮ ಕೂಡ್ಲಿಗಿ(ದ್ರೌವದಿ ಮತ್ತು ಸುಭದ್ರ) ಇವರು ಪತ್ರಧಾರಿಗಳಾಗಿ ನಾಟಕ ಪ್ರದರ್ಶಿಸಿ, ನೋಡುಗರ ಗಮನ ಸೆಳೆದರು. ಜೆ.ದೊಡ್ಡಬಸಪ್ಪ, ಉಪ್ಪಾರು ದೊಡ್ಡಬಸಪ್ಪ(ಮುಮ್ಮೇಳ) ಹಾಗೂ ಹೆಚ್.ಶಿವರುದ್ರ್ಪ, ತಿಪ್ಪೇಶ್ವಾಮಿ, ಜೀರು ಮಲ್ಲಿಕಾರ್ಜುನ, ಕರಿಬಸವನಗೌಡ(ಹಾರ್ಮೋನಿಯಂ) ನಾಟಕಕ್ಕೆ ಸಾಥ್ ನೀಡಿದರು. ಬಯಲಾಟದ ವ್ಯವಸ್ಥಾಪಕರಾಗಿ ಹೆಚ್.ಲಿಂಗೇಶ, ವಾಲ್ಮೀಕಿ ನಾಗಪ್ಪ, ಗನಮದ್ಲಿ, ಕಟ್ಟೆ ಅಂಬರೇಶ, ದಾಸರ ಹನುಮಂತಪ್ಪ, ದಮ್ಮೂರು ಕೃಷ್ಣಪ್ಪ, ಉಪ್ಪಾರು ಲಿಂಗಪ್ಪ ಕಾರ್ಯನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 