ವೀರ ಅಭಿಮನ್ಯು ಕಾಳಗ ಬಯಲಾಟ ಪ್ರದರ್ಶನಕ್ಕೆ ಜನರ ಮೆಚ್ಚುಗೆ
People appreciate the brave Abhimanyu Kalaga Bayalata performance
ಕಂಪ್ಲಿ 06: ಗ್ರಾಮೀಣ ಪ್ರದೇಶದಲ್ಲಿ ನಾಟಕ, ಬಯಲಾಟ ನಡೆಯುತ್ತಿರುವುದರಿಂದ ಗ್ರಾಮೀಣ ಕಲೆಗಳು ಉಳಿಯುತ್ತಿವೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು. ತಾಲೂಕಿನ ನಂ.10 ಮುದ್ದಾಪುರ ಗ್ರಾಮದಲ್ಲಿ ಚೌಡಮ್ಮದೇವಿ ಜಾತ್ರ ಪ್ರಯುಕ್ತ ಬಸವೇಶ್ವರ ಕೃಪಾಪೋಷಿತ ಕರ್ನಾಟಕ ಬಯಲಾಟ ಮಂಡಳಿ ಹಾಗೂ ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೀರ ಅಭಿಮನ್ಯುಕಾಳಗ ಅಥಾತ್ ಸೈಂಧವನ ವದಾ ಎಂಬ ಸುಂದರರವಾದ ಪೌರಾಣಿಕ ಬಯಲು ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಯುವಕರ ಮೇಲೆ ಸಾಮಾಜಿಕ ಜಾಲತಾಣಗಳು ಹೆಚ್ಚು ಪ್ರಭಾವ ಬೀರಿ ಕಲೆ, ಸಾಹಿತ್ಯದ ಅಭಿರುಚಿ ಕಡಿಮೆಯಾಗುತ್ತಿದೆ ಎಂದರು. ರೈತ ಮುಖಂಡ ಕಟ್ಟೆ ದುರುಗಪ್ಪ ಬಯಲಾಟದ ಅಧ್ಯಕ್ಷತೆವಹಿಸಿದ್ದರು.
ಈ ಸಂದರ್ಭದಲ್ಲಿ ಕಟ್ಟೆ ಮಹಾದೇವ, ಎಚ್.ಎಂ.ಬಸವರಾಜಸ್ವಾಮಿ, ಧನಂಜಯ್ಯ, ಎಂ.ಎಸ್.ವಿರುಪಾಕ್ಷಯ್ಯ, ಕಟ್ಟೆ ಶಂಕರ್, ವಿಜಯಮಹಾಂತೇಶ, ತಾಯಣ್ಣ, ಹೆಚ್.ಸೋಮೇಶ್ವರಿ ಪರಶುರಾಮ, ಜಡೆ ಸಾವಿತ್ರಮ್ಮ ಮಹಾದೇವಪ್ಪ, ಬಳೆ ಮಲ್ಲಿಕಾರ್ಜುನ, ವೈ.ಉಮೇಶ, ಬಂಡಾರಿ ನರಸಪ್ಪ, ಕೆ.ಶಿವರಾಮಪ್ಪ, ಹೋಟಲ್ ಕುಮಾರಸ್ವಾಮಿ ಸೇರಿದಂತೆ ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಭಾಗವಹಿಸಿದ್ದರು. ಪ್ರದರ್ಶನ: ಉಪ್ಪಾರು ಮನೋಜ್(ಬಾಲಕೃಷ್ಣ), ವಾಲ್ಮೀಕಿ ದೊಡ್ಡ ತಿಪ್ಪಯ್ಯ(ಧರ್ಮರಾಯ), ಅಂಗಜಾಲರ ಬಿ.ಹನುಮಂತಪ್ಪ(ಅಭಿಮನ್ಯು), ವಾಲ್ಮೀಕಿ ಓಬಳೇಶ(ಭೀಮಸೇನ), ಗೌಳೇರು ಉಮೇಶ(ದುರ್ಯೋಧನ), ದಮ್ಮೂರು ವೆಂಕಟೇಶ(ದ್ರೋಣ), ವಾಲ್ಮೀಕಿ ಸಣ್ಣ ಲಿಂಗಣ್ಣ(ಕರ್ಣ), ಉಪ್ಪಾರು ರಾಜಶೇಖರ(ಸೈಂಧವ), ಹೆಚ್.ರಮೇಶ(ಕೃಷ್ಣ), ಹೆಚ್.ಕುಮಾರಸ್ವಾಮಿ(ಅರ್ಜುನ), ಉಮಾದೇವಿ(ಉತ್ತರೆ), ಭೋವಿ ಪವಿತ್ರ(ಕನಕಾಂಗಿ), ಕಮಲಮ್ಮ ಕೂಡ್ಲಿಗಿ(ದ್ರೌವದಿ ಮತ್ತು ಸುಭದ್ರ) ಇವರು ಪತ್ರಧಾರಿಗಳಾಗಿ ನಾಟಕ ಪ್ರದರ್ಶಿಸಿ, ನೋಡುಗರ ಗಮನ ಸೆಳೆದರು. ಜೆ.ದೊಡ್ಡಬಸಪ್ಪ, ಉಪ್ಪಾರು ದೊಡ್ಡಬಸಪ್ಪ(ಮುಮ್ಮೇಳ) ಹಾಗೂ ಹೆಚ್.ಶಿವರುದ್ರ್ಪ, ತಿಪ್ಪೇಶ್ವಾಮಿ, ಜೀರು ಮಲ್ಲಿಕಾರ್ಜುನ, ಕರಿಬಸವನಗೌಡ(ಹಾರ್ಮೋನಿಯಂ) ನಾಟಕಕ್ಕೆ ಸಾಥ್ ನೀಡಿದರು. ಬಯಲಾಟದ ವ್ಯವಸ್ಥಾಪಕರಾಗಿ ಹೆಚ್.ಲಿಂಗೇಶ, ವಾಲ್ಮೀಕಿ ನಾಗಪ್ಪ, ಗನಮದ್ಲಿ, ಕಟ್ಟೆ ಅಂಬರೇಶ, ದಾಸರ ಹನುಮಂತಪ್ಪ, ದಮ್ಮೂರು ಕೃಷ್ಣಪ್ಪ, ಉಪ್ಪಾರು ಲಿಂಗಪ್ಪ ಕಾರ್ಯನಿರ್ವಹಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 