ಕಾರವಾರ ಪಾಸ್ಟಿಕ್ ಕಸ ಬೆಳಗಾವಿ ದಾಲ್ಮಿಯಾ ಸಿಮೆಂಟ್ ಕಾಖರ್ಾನೆಗೆ
ಜಿಲ್ಲೆಯಲ್ಲೇ ಪ್ರಥಮ:
ಕಾರವಾರ ಪಾಸ್ಟಿಕ್ ಕಸ ಬೆಳಗಾವಿ ದಾಲ್ಮಿಯಾ ಸಿಮೆಂಟ್ ಕಾಖರ್ಾನೆಗೆ
ಕಾರವಾರ: ಇಲ್ಲಿನ ಶಿರವಾಡ ಕಸ ಸಂಗ್ರಹ ಘನತ್ಯಾಜ್ಯ ಘಟಕದಿಂದ ಪ್ಲಾಸ್ಟಿಕ್ನ್ನು ಇನ್ನು ಮುಂದೆ ಪ್ರತಿವಾರ ಟ್ರಕ್ನಲ್ಲಿ ಬೆಳಗಾವಿಗೆ ಸಾಗಿಸಲಾಗುತ್ತಿದೆ.
ಶಿರವಾಡ ಘಟಕದಲ್ಲಿನ ಬೇರ್ಪಡಿಸಿದ ಪ್ಲಾಸ್ಟಿಕ್ನ್ನು ಸಿಮೆಂಟ್ ಕಾಖರ್ಾನೆಯಲ್ಲಿ ಮರುಬಳಸಲು ಕೊಂಡಯ್ಯಲಾಗುತ್ತಿದೆ. ಜಿಲ್ಲೆಯಲ್ಲಿ ಇಂಥ ಪ್ರಯೋಗವನ್ನು ಮೊದಲ ಬಾರಿಗೆ ಆರಂಭಿಸಿದ ಕೀತರ್ಿ ಕಾರವಾರ ನಗರಸಭೆಗೆ ಇದೀಗ ಪ್ರಾಪ್ತಿಯಾಗಿದೆ. ಪ್ಲಾಸ್ಟಿಕ್ ತುಂಬಿದ 45 ಬಂಡಲ್ಗಳನ್ನು ಟ್ರಕ್ ಮೊದಲ ಬಾರಿಗೆ ಹೊತ್ತು ಬೆಳಗಾವಿಯತ್ತ ಸಾಗಿತು.
ತ್ಯಾಜ್ಯ ಪ್ಲಾಸ್ಟಿಕ್ ಇದೀಗ ದಾಲ್ಮಿಯಾ ಸಿಮೆಂಟ್ ಕಾಖರ್ಾನೆಯಲ್ಲಿ ಮರು ಬಳಕೆಯಾಗಲಿದೆ. ಇನ್ನು ಮುಂದೆ ಪ್ರತಿವಾರಕ್ಕೊಮ್ಮೆ ಪ್ಲಾಸ್ಟಿಕ್ ಕಸ ತೆಗದುಕೊಂಡು ಹೋಗಲು ದಾಲ್ಮಿಯಾ ಕಂಪನಿಯ ಟ್ರಕ್ ಬರಲಿದೆ. ಇದಕ್ಕಾಗಿ ನಗರಸಭೆಗೆ ಉಚಿತ ಸೇವೆಯನ್ನು ದಾಲ್ಮಿಯಾ ಕಂಪನಿ ನೀಡಲು ಮುಂದಾಗಿದೆ. ಬೆಳಗಾವಿ ಯರವಾಡದಲ್ಲಿನ ಸಿಮೆಂಟ್ ಘಟಕಕ್ಕೆ ಕಾರವಾರದ ತ್ಯಾಜ್ಯ ಪ್ಲಾಸ್ಟಿಕ್ ಸಾಗಟವಾಗಲಿದೆ. ಪರಿಸರ ರಕ್ಷಣೆಯ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆಯಾಗಿದ್ದು, ಶಿರವಾಡದ ಜನತೆ ಸಹ ತ್ಯಾಜ್ಯ ಪ್ರತಿವಾರ ಸಾಗಾಟ ವಾಗುವುದರಿಂದ ಸಮಾಧಾನದ ನಿಟ್ಟುಸಿರು ಬಿಡುವ ಲಕ್ಷಣಗಳಿವೆ.
ದಾಲ್ಮೀಯ ಕಂಪನಿ ಪ್ಲಾಸ್ಟಿಕ್ ಸಾಗಾಟದ ಸೇವೆ ನೀಡಲು ಮುಂದಾಗಿದೆ ಎಂದು. ತ್ಯಾಜ್ಯದ ಮರುಬಳಕೆಯ ಪಯರ್ಾಯವನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಾರವಾರ ನಗರಸಭೆ ಬಳಸಿಕೊಂಡಿದೆ ಎಂದು ಪೌರಾಯುಕ್ತ ಎಸ್.ಯೋಗೇಶ್ವರ ತಿಳಿಸಿದ್ದಾರೆ. ಶಿರವಾಡದ ಘನತ್ಯಾಜ್ಯ ಘಟಕದ ಸೂಕ್ತ ನಿರ್ವಹಣೆಗೆ ಸಹ ಹಲವು ಉಪ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 