ಮಕ್ಕಳ ಜೊತೆಗೆ ಮಕ್ಕಳ ಭವಿಷ್ಯವನ್ನು ರೂಪಿಸಲು ಪೋಷಕರು ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿ: ಉದ್ಧವ್ ಕುಲಕರ್ಣಿ
ಕೊಪ್ಪಳ 15: ಮಕ್ಕಳಿಗೆ ಶಿಕ್ಷಣ ನೀಡುವುದು ಕೇವಲ ಶಾಲೆಗಳ ಜವಾಬ್ದಾರಿ ಅಷ್ಟೇ ಅಲ್ಲ. ಶಾಲೆಯಿಂದ ಮನೆಗೆ ಬಂದ ಮಕ್ಕಳ ಹೋಂವರ್ಕ್ ಮತ್ತು ಶಾಲೆಯಲ್ಲಿ ನಡೆದ ಚಟುವಟಿಕೆಗಳ ಬಗ್ಗೆ ಪ್ರಶ್ನೆ ಮಾಡುವುದರ ಮೂಲಕ ಮಕ್ಕಳ ಜೊತೆಗೆ ಮಕ್ಕಳ ಭವಿಷ್ಯವನ್ನು ರೂಪಿಸಲು ಪೋಷಕರು ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಬೇಕು ಎಂದು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಸಿಎಸ್ಆರ್ ಅಧಿಕಾರಿ ಉದ್ಧವ್ ಕುಲಕರ್ಣಿ ಹೇಳಿದರು.ಕಿನ್ನಾಳ ಗ್ರಾಮದಲ್ಲಿ ನಡೆದ ಸೇವಾ ವಿದ್ಯಾಲಯದ 22ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಿಗೆ ಓದಿಗಿಂತ ಮೊಬೈಲ್ ದೊಡ್ಡ ಗೀಳಾಗಿ ಕಾಡುತ್ತಿದೆ. ಅಗತ್ಯಕ್ಕೆ ತಕ್ಕಂತೆ ಅಷ್ಟೇ ಮೊಬೈಲ್ ಅನ್ನು ಬಳಸಬೇಕು. ಮೊಬೈಲ್ ನಿಂದ ಮಕ್ಕಳನ್ನು ದೂರ ಇಡಬೇಕು ಎಂದು ಕಿವಿಮಾತು ಹೇಳಿದರು.ಕಿನ್ನಾಳ ಗ್ರಾಮವನ್ನು ಅಭಿವೃದ್ಧಿಗಾಗಿ ದತ್ತು ತೆಗೆದುಕೊಳ್ಳಲಾಗಿದ್ದು ಕಿರ್ಲೋಸ್ಕರ್ ಕಂಪನಿಯ ಜೊತೆಗೆ ಇತರೆ ಕಾರ್ಖಾನೆಗಳು ಸಹ ಕೈಜೋಡಿಸಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಸಿದ್ಧವಾಗಿವೆ.ಗ್ರಾಮದ ಅಭಿವೃದ್ಧಿಗಾಗಿ ನಮ್ಮಿಂದಾಗುವ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಲಾಗುವುದು. 22 ವರ್ಷಗಳ ಕಾಲ ವಿದ್ಯಾ ಸಂಸ್ಥೆಯನ್ನು ನಡೆಸುವುದು ಸುಲಭದ ಮಾತಲ್ಲ ಈ ನಿಟ್ಟಿನಲ್ಲಿ ಸೇವಾ ವಿದ್ಯಾಲಯದ ಸೇವೆ ನಿಜಕ್ಕೂ ಪ್ರಶಂಸನೀಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕಿನ್ನಾಳ ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ವೀರೇಶ್ ತಾವರಗೇರಾ ಮಾತನಾಡಿ ಗ್ರಾಮೀಣ ಮಟ್ಟದಲ್ಲಿ ಆಂಗ್ಲ ಮಾದ್ಯಮ ಶಾಲೆ ತರೆದಿರುವುದು ಹೆಮ್ಮೆಯ ವಿಷಯ,ನೂರು ದೇವಾಲಯಗಳನ್ನು ಕಟ್ಟಬಹುದು ಆದರೆ ಒಂದು ವಿದ್ಯಾ ಸಂಸ್ಥೆಯನ್ನು ತೆರೆದು ಅದನ್ನು ನಡೆಸುವುದು ದೊಡ್ಡ ಕೆಲಸ ಎಂದು ಹೇಳುತ್ತಾ ಸಂಸ್ಥೆ ಬೆಳೆದು ಬಂದ ರೀತಿಯನ್ನು ಸ್ಮರಿಸಿದರು. ಸನ್ಮಾನಿತರಾಗಿ ಆಗಮಿಸಿದ್ದ ಪತ್ರಕರ್ತ ಪ್ರಮೋದ್ ಕುಲಕರ್ಣಿ ಈ ಸಂಸ್ಥೆಯ ಹೆಮ್ಮೆಯ ವಿಷಯವೆಂದರೆ ಒಂದು ವಿಶಾಲವಾದ ಮೈದಾನವಿದೆ.ಮಕ್ಕಳ ದೈಹಿಕ ಸದೃಡತೆಗೆ ಆಟವೆ ಮುಖ್ಯವಾಗಿದ್ದು, ಈ ಕಿನ್ನಾಳ ಗ್ರಾಮ ಹೇಗೆ ಕರ ಕುಶಲತೆಗೆ ಅಂತರಾಷ್ಟ್ರೀಯವಾಗಿ ಖ್ಯಾತಿ ಪಡೆದಿದೆಯೋ ಆದೆರೀತಿ ಸೇವಾ ಸಂಸ್ಥೆ ಖ್ಯಾತಿಪಡಿಯುವಂತಾಗಲಿ ಎಂದು ಹಾರೈಸಿದರು.ಪತ್ರಕರ್ತ ಸಿರಾಜ್ ಬಿಸರಳ್ಳಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜ್ ಚಿಲವಾಡಗಿ ವಹಿಸಿಕೊಂಡಿದ್ದರು. ವೇದಿಕೆ ಮೇಲೆ ಜೆಸ್ಕಾಂ ಎಇಇ ಸೈಯದ್ ಯೂನಸ್, ಪತ್ರಕರ್ತ ಖಲೀಲ್ ಉಡೇವು, ಎಂ.ಡಿ ಅಖೀಲ್ ಉಡೇವು, ಸಂಸ್ಥೆಯ ಮುಖ್ಯೋಪಾಧ್ಯಾಯ ದಾವಸಾಬ್ ಬೆಟಗೇರಿ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಸಿರಾಜು ಬಿಸರಹಳ್ಳಿ ದತ್ತಿ ಪ್ರಶಸ್ತಿ ಪಡೆದಿರುವ ಎಂ.ಡಿ ಅಖೀಲ್ ಉಡೇವು, ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಪ್ರಮೋದ್ ಕೆ, ಉದ್ಧವ್ ಕುಲಕರ್ಣಿ, ಖಲೀಲ್ ಉಡೇವು, ಸೈಯದ್ ಯುಸೂಫ್, ಇವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು.ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜೆಸ್ಕಾಂ ಎಇಇ ಸೈಯದ್ ಯೂನಸ್ ಅವರು ಉದ್ಘಾನೆಯನ್ನು ಮಾಡಿದರು, ಸ್ವಾಗತ ಸುಮಿತ್ರ ಗಡಾದ್, ಪ್ರಾಸ್ತಾವಿಕ ದಾವಸಾಬ್ ಬೆಟಗೇರಿ, ವಂದನಾರೆ್ಣ ದೀಪ, ನಿರುಪಣೆಯನ್ನು ಯಲ್ಲಮ್ಮ ಪೂಜಾರ ಅವರು ಮಾಡಿದರು.ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.