ಶವ ಸಂಸ್ಕಾರಕ್ಕೆ ನೆರವಾದ ಪಂಚಾಯ್ತಿ ಸದಸ್ಯ

ಶವ ಸಂಸ್ಕಾರಕ್ಕೆ ನೆರವಾದ ಪಂಚಾಯ್ತಿ ಸದಸ್ಯ Panchayat member who helped with the cremation

ಶವ ಸಂಸ್ಕಾರಕ್ಕೆ ನೆರವಾದ ಪಂಚಾಯ್ತಿ ಸದಸ್ಯ

ಹೂವಿನಹಡಗಲಿ :25-ತಾಲೂಕಿನ ಹೊಳಗುಂದಿ ಗ್ರಾಮದ 5ನೇ ವಾರ್ಡ್‌ ನ ಮಹಿಳೆ ಕಂದಗಲ್ಲು ಗೌರಮ್ಮ ಅನಾರೋಗ್ಯ ದಿಂದ ಬುಧವಾರ ಸಾವನ್ನಪ್ಪಿದ್ದಳೆ . ಇದೇ ವೇಳೆ ಅದೇ ವಾರ್ಡಿನ ಸದಸ್ಯ ಕೆ. ರುದ್ರಗೌಡ ತನಗೆ ನೀಡುವ ಪಂಚಾಯ್ತಿ  ಮಾಸಿಕ ಗೌರವಧನವನ್ನು ಕಂದಗಲ್ಲು ಗೌರಮ್ಮ ಅವರ ಕುಟುಂಬದ ಸದಸ್ಯರಿಗೆ ಎರಡು ಸಾವಿರ ಚಕ್ ನೀಡುವ ಮೂಲಕ ನೆರವಿನ ಹಸ್ತಚಾಚಿದರು. ಕಳೆದ ನಾಲ್ಕು ವರ್ಷ ಗಳಿಂದ ತಮ್ಮ ವಾರ್ಡಿನಲ್ಲಿ ಯಾರೇ ಬಡವರು ಮೃತಪಟ್ಟರೇ ಸದಸ್ಯ ರುದ್ರಗೌಡ ಅವರ ಮನೆಗೆ ತೆರಳಿ ಅವರ ಕುಟುಂಬದ ಸದಸ್ಯರಿಗೆ ಸಂತ್ವಾನ ಹೇಳುವ ಮೂಲಕ ಎರಡು ಸಾವಿರ. ರೂ.ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾನೆ.ಜತೆಗೆ ಸರ್ಕಾರದ ಯೋಜನೆ ಬಗ್ಗೆ ತಿಳಿಸಿ ಸೌಲಭ್ಯಗಳು ಕೊಡುಸುವದರ ಜತೆಗೆ  ಬಡವರ ಕಷ್ಟ.ಸುಖಗಳಲ್ಲಿ ಭಾಗವಹಿಸುತ್ತಾನೆ.  ಸರ್ಕಾರ ಬಡವರಿಗಾಗಿ ರೂಪಿಸಿದ ನಾನಾ ಯೋಜನೆಗಳಲ್ಲಿ ಅಂತ್ಯ ಸಂಸ್ಕಾರ ಪರಿಹಾರವೂ ಒಂದಾಗಿದ್ದು ಇದೀಗ ಕಳೆದ 3ರಿಂದ 4ವರ್ಷದಿಂದ ಯೋಜನೆ ನಿಂತಿದೆ ಎನ್ನಲಾಗಿದೆ.