ಪಹರೆ ಸಂಸ್ಥೆಗೆ ‘ಇಂದಿರಾ ಪ್ರಿಯದರ್ಶಿನಿ ಪರಿಸರ’ ಪ್ರಶಸ್ತಿ ಪ್ರದಾನ

ಪಹರೆ ಸಂಸ್ಥೆಗೆ ‘ಇಂದಿರಾ ಪ್ರಿಯದರ್ಶಿನಿ ಪರಿಸರ’ ಪ್ರಶಸ್ತಿ ಪ್ರದಾನ Pahare organization presented with ‘Indira Priyadarshini Environment Award’


ಕಾರವಾರ 04: ಪರಿಸರ ಸ್ವಚ್ಛತೆ ಮತ್ತು ಜಾಗೃತಿ ಕ್ಷೇತ್ರದಲ್ಲಿ ದಶಕಕ್ಕೂ ಹೆಚ್ಚು ಕಾಲ ಕಾರವಾರದಲ್ಲಿ  ಕೆಲಸ  ಮಾಡುತ್ತಿರುವ   ಪಹರೆ ವೇದಿಕೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಅಂಗವಾಗಿ ಮಂಗಳವಾರ ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ‘ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ’ಯನ್ನು ನೀಡಲಾಯಿತು.ಪರಿಸರ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ನರೇಂದ್ರಸ್ವಾಮಿ ಅವರು ವೇದಿಕೆಯ ಅಧ್ಯಕ್ಷ ನಾಗರಾಜಗೆ   ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಶಿವರಾಮ ಹೆಬ್ಬಾರ ಮತ್ತು ಮಹೇಶ ತೆಂಗಿನಕಾಯಿ ಸೇರಿದಂತೆ ಹಲವು ಗಣ್ಯರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.ಪ್ರಶಸ್ತಿ ಸ್ವೀಕರಿಸಿ  ಮಾತನಾಡಿದ ’ಪಹರೆ’ ಸಂಸ್ಥಾಪಕ ಅಧ್ಯಕ್ಷ , ಈ ಗೌರವಕ್ಕಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.  ಸಮಾಜದ ಸ್ವಚ್ಛತೆಗಾಗಿ ಶ್ರಮಿಸಿದ ಪಹರೆಯ ಎಲ್ಲಾ ಸಹೋದರ, ಸಹೋದರಿಯರ ಸೇವೆಗೆ ಈ ಪ್ರಶಸ್ತಿಯು ಸಮರೆ​‍್ಣ  ಎಂದರು. ಕಳೆದ ಹತ್ತು ದಿಂದ ಕಾರವಾರದಲ್ಲಿ ಪಹರೆ ವೇದಿಕೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಲು ಪ್ರತಿ ವಾರಕ್ಕೊಮ್ಮೆ ಒಂದು ಘಂಟೆ ಸ್ವಚ್ಚತೆಯ  ಕಾರ್ಯವನ್ನ ಪ್ರಾರಂಭಿಸಿತ್ತು. ಪ್ರತಿ ಶನಿವಾರ  ಒಂದು ತಾಸು ಸ್ವಚ್ಚತೆ ನಡೆಸಿಕೊಂಡು ಬಂದಿದೆ. ಕಾರವಾರ ಮಾತ್ರವಲ್ಲದೇ ಜಿಲ್ಲೆಯ ವಿವಿದೆಡೆ ತೆರಳಿ ದೇವಸ್ಥಾನ,ಕಡಲ ತೀರಗಳು, ಕೆರೆಗಳ ಸ್ವಚ್ಚತೆ  ಕಾರ್ಯವನ್ನ ಆಯೋಜಿಸುತ್ತಾ ಬಂದಿದೆ.....