ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರಭಾಕರ ಕೋರೆ ಅವರಿಗೆ ಕೆಎಲ್‌ಎಸ್ ಸಂಸ್ಥೆಯಿಂದ ಸನ್ಮಾನ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ   ಪ್ರಭಾಕರ ಕೋರೆ ಅವರಿಗೆ ಕೆಎಲ್‌ಎಸ್ ಸಂಸ್ಥೆಯಿಂದ ಸನ್ಮಾನ Padma Shri awardee Prabhakar Kore honoured by KLS


ಬೆಳಗಾವಿ  02: ಸಾರ್ವಜನಿಕ ಜೀವನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಮಹೋನ್ನತ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ಪ್ರತಿಷ್ಠಿತ "ಪದ್ಮಶ್ರೀ" ಪ್ರಶಸ್ತಿಯನ್ನು ಘೋಷಿಸಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಲಾ ಸೊಸೈಟಿ (ಕೆಎಲ್‌ಎಸ್) ಪದಾಧಿಕಾರಿಗಳು ದಿನಾಂಕ 02.02.2026 ರಂದು ಶ್ರೀ ಪ್ರಭಾಕರ್ ಕೋರೆ ಅವರನ್ನು ಗೌರವಿಸಿ ಸನ್ಮಾನಿಸಿದರು.ಈ ಸಮಾರಂಭದಲ್ಲಿ ಕೆಎಲ್‌ಎಸ್ ಅಧ್ಯಕ್ಷರಾದ   ಪ್ರದೀಪ್ ಸಾವಕಾರ್, ಚೇರ್ಮನ್   ಎ. ಕೆ. ತಗಾರೆ, ಕಾರ್ಯದರ್ಶಿಗಳಾದ ಶ್ರೀ ವಿ. ಎಂ. ದೇಶಪಾಂಡೆ ಮತ್ತು   ಎಸ್‌. ವಿ. ಗಣಾಚಾರಿ, ಆಡಳಿತ ಮಂಡಳಿ ಸದಸ್ಯರಾದ ಶ್ರೀ ವಿ. ಜಿ. ಕುಲಕರ್ಣಿ, ಕೆಎಲ್‌ಎಸ್ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಆಡಳಿತ ಮಂಡಳಿ ಚೇರ್ಮನ್   ಆರ್‌. ಎಸ್‌. ಮುತಾಲಿಕ ಮತ್ತು ಪ್ರಾಚಾರ್ಯರಾದ ಡಾ. ವಿ. ಎಸ್‌. ಜಲಿಹಾಳ್ ಉಪಸ್ಥಿತರಿದ್ದರು.ಉಪಸ್ಥಿತರಿದ್ದ ಎಲ್ಲಾ ಗಣ್ಯರು  ಪ್ರಭಾಕರ್ ಕೋರೆ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಸಮಾಜಕ್ಕೆ ಅವರು ಸಲ್ಲಿಸಿದ ಅಮೂಲ್ಯ ಸೇವೆಯನ್ನು ಶ್ಲಾಘಿಸಿದರು. ಈ "ಪದ್ಮಶ್ರೀ" ಗೌರವವು ಇಡೀ ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ಕ್ಷಣವಾಗಿದೆ ಎಂದು ಗಣ್ಯರು ಹರ್ಷ ವ್ಯಕ್ತಪಡಿಸಿದರು.