ನೂತನ ಮಹಾತ್ಮಾ ಗಾಂಧಿಜಿ ಪುತ್ಥಳಿ ಅನಾವರಣ
New Mahatma Gandhi statue unveiled
ಸಿಂದಗಿ 24: ಇದೇ 26 ರಂದು ಸಾಯಂಕಾಲ 5 ಗಂಟೆಗೆ ನೂತನ ಮಹಾತ್ಮಾ ಗಾಂಧಿಜಿ ಪುತ್ಥಳಿ ಅನಾವರಣ, ರಾಷ್ಟ್ರೀಯ ಲಾಂಛನ ಅಶೋಕ ಸ್ಥಂಭ ಲೋಕಾರೆ್ಣ, ನಗರಸಭೆ ಕಾರ್ಯಾಲಯ, ಸರಕಾರಿ ಆಸ್ಪತ್ರೆಗೆ ಹೈಟೆಕ್ ಅಂಬುಲೆನ್ಸ ಚಾಲನೆ, ಹಾಗೂ ಡಯಾಲಿಸಿಸ್ ಸೆಂಟರ್, ಪಿಡಿಯಾಟ್ರಿಕ್ ಐಸಿಯು ಇವುಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲರು ಉದ್ಘಾಟಿಸಲಿದ್ದಾರೆ ಕಾರಣ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಸಕ ಅಶೋಕ ಮನಗೂಳಿ ಕರೆ ನೀಡಿದರು.
ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಾಂಧಿಜಿ ವೃತ್ತದಲ್ಲಿ ಆಯೋಜಿಸಲಾದ ಕಾರ್ಯಕ್ರಮದ ಸಾನಿಧ್ಯತೆಯನ್ನು ಸೊನ್ನ ದಾಸೋಹ ವಿರಕ್ತಮಠದ ಡಾ. ಶಿವಾನಂದ ಮಹಾಸ್ವಾಮಿಗಳು, ಧಮ್ಮ ವಿಹಾರದ ಸಂಘಪಾಲ ಬಂತೇಜಿ, ಹುಲಿಜಂತಿ ಸುಕ್ಷೇತ್ರದ ಪಟ್ಟದ ಪೂಜಾರಿ ಮಾಳಿಂಗರಾಯ ಮಹಾರಾಜರು ವಹಿಸಲಿದ್ದಾರೆ ಎಂದು ತಿಳಿಸಿದ ಅವರು, ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ 5ನೇ ಪುಣ್ಯ ಸ್ಮರಣೆ ನಿಮಿತ್ಯ ಎಂ.ಸಿ.ಮನಗೂಳಿ ಪ್ರತಿಷ್ಠಾನದವತಿಯಿಂದ 27 ಮತ್ತು 28 ರಂದು ಭಗೀರಥ ಕಪ್ ಹೊನಲು ಬೆಳಕಿನ ವಾಲೀಬಾಲ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.
ಇಲ್ಲಿ ಕರ್ನಾಟಕ ರಾಜ್ಯ ಪೊಲೀಸ್, ಎ.ಎಸ್.ಸಿ ಬೆಂಗಳೂರು, ಕರ್ನಾಟಕ ಪೋಸ್ಟಲ್, ಸ್ಪೋರ್ಟ್ಸ ಹಾಸ್ಟೇಲ್, ಎಸ್.ಡಿ.ಎಂ ಉಜಿರೆ, ಸೌತ್ ಸೆಂಟ್ರಲ್ ರೇಲ್ವೆ ಹುಬ್ಬಳ್ಳಿ ರಾಜ್ಯದ 6 ತಂಡಗಳು, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹಾಗೂ ಏಕಲವ್ಯ ಪುರಷ್ಕೃತರು ಪಂಧ್ಯಾವಳಿಗಳಲ್ಲಿ ಬಾಗವಹಿಸಲಿದ್ದಾರೆ.
ಪ್ರಥಮ ರೂ 1ಲಕ್ಷ, ದ್ವೀತಿಯ ರೂ 75 ಸಾವಿರ, ತೃತೀಯ ರೂ.50 ಸಾವಿರ, 4ನೇ ಬಹುಮಾನ ರೂ 25 ಸಾವಿರ ಹಾಗೂ ಭಗೀರಥ ಕಪ್ ಇಡಲಾಗಿದೆ. ಕಾರಣ ಕ್ರೀಡಾಭಿಮಾನಿಗಳು ಕ್ರೀಡೆಗೆ ಪ್ರೋತ್ಸಾಹ ನೀಡಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ವೈ.ಸಿ.ಮಯೂರ, ಪ್ರವೀಣ ಕಂಠಿಗೊಂಡ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 