ಕುಮಟಾ ಕಾರವಾರಕ್ಕೆ ನೂತನ ಬಿಇಒಗಳ ನೇಮಕ

ಕುಮಟಾ ಕಾರವಾರಕ್ಕೆ ನೂತನ ಬಿಇಒಗಳ ನೇಮಕ New BEOs appointed for Kumta Karwar

ಕುಮಟಾ ಕಾರವಾರಕ್ಕೆ ನೂತನ ಬಿಇಒಗಳ ನೇಮಕ 

ಕಾರವಾರ 27 : ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹಾಗೂ ಕಾರವಾರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದ್ದು, ನೂತನ ಬಿಇಒ ಗಳನ್ನು ಸರ್ಕಾರ ನೇಮಕ ಮಾಡಿದೆ .ಕಾರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಹಾಸ ಪದ್ಮನಾಭ ರಾಯ್ಕರ್ ಅವರ ಸ್ಥಾನಕ್ಕೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಯಾಗಿದ್ದ ಉಮೇಶ ಎನ್‌. ನಾಯ್ಕ ಅವರನ್ನು ನೇಮಕ ಮಾಡಲಾಗಿದೆ.ಇನ್ನೂ ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್‌. ಭಟ್ ಅವರ ಅವರನ್ನ ವರ್ಗಾವಣೆ ಮಾಡಿದ್ದು,ಉದಯ ರಾಮಚಂದ್ರ ನಾಯ್ಕ ರನ್ನು ನಿಯೋಜನೆ ಮಾಡಲಾಗಿದೆ. ಇನ್ನೂ ಕಾರವಾರ ಹಾಗೂ ಕುಮಟಾದಲ್ಲಿ ಸೇವೆ ಸಲ್ಲಿಸುತ್ತಿದ್ದ ಬಿಇಒ ಗಳನ್ನು ವರ್ಗಾವಣೆ ಮಾಡಲಾಗಿದ್ದು, ಯಾವುದೇ ಸ್ಥಳಕ್ಕೆ ನಿಯೋಜನೆ ಮಾಡದೆ ಕಾಯ್ದಿರಿಸಲಾಗಿದೆ.ಅಧಿಕಾರ ಸ್ವೀಕರಿಸಿದ ಉದಯ ನಾಯ್ಕ :ಕುಮಟಾ ಕ್ಷೇತ್ರದ ನೂತನ ಕ್ಷೇತ್ರ ಶಿಕ್ಷಾಧಿಕಾರಿಯಾಗಿ ನೇಮಕಗೊಂಡಿರುವ ಉದಯ್ ನಾಯ್ಕ ಅವರು ಇಂದು ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು....