ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಾಚರಣೆಯ ಕಾಲ್ನಡಿಗೆ ಜಾಥಕ್ಕೆ ಚಾಲನೆ

National Road Safety Month walk started

ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಾಚರಣೆಯ ಕಾಲ್ನಡಿಗೆ ಜಾಥಕ್ಕೆ ಚಾಲನೆ 

ಕೊಪ್ಪಳ 07: ಕೊಪ್ಪಳ ಪ್ರಾದೇಶಿಕ ಸಾರಿಗೆ ಕಛೇರಿ, ಗವಿಸಿದ್ದೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಾಚರಣೆ-2025ರ ಪ್ರಯುಕ್ತ ಕೊಪ್ಪಳ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಲ್ನಡಿಗೆ ಜಾಥಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ರಾಮ್ ಎಲ್ ಅರಸಿದ್ಧಿ ಹಾಗೂ ಕಲಬುರಗಿ ವಿಭಾಗದ ಜಂಟಿ ಸಾರಿಗೆ ಆಯುಕ್ತರಾದ ಸಿದ್ದಪ್ಪ ಹೆಚ್ ಕಲ್ಲೇರ್ ಅವರು ಹಸಿರು ನಿಶಾನೆ ತೊರಿಸುವ ಮೂಲಕ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ್, ಪ್ರಾದೇಶಿಕ ಸಾರಿಗೆ ಇಲಾಖೆಯ ಹಿರಿಯ ಮೋಟಾರು ವಾಹನ ನೀರೀಕ್ಷಕರಾದ ಮಂಜುನಾಥ ಪ್ರಸಾದ್ ಹಾಗೂ ಡಿ.ಹೆಚ್‌.ವಿಜಯಕುಮಾರ, ಮೋಟಾರು ವಾಹನ ನೀರೀಕ್ಷಕ ವಿಜೇಂದ್ರ ಢವಳಗಿ ಸೇರಿದಂತೆ ಕಚೇರಿಯ ಸಿಬ್ಬಂದಿ, ಎನ್‌.ಸಿ.ಸಿ ಹಾಗೂ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  

ಕಾಲ್ನಡಿಗೆ ಮೂಲಕ ಜಾಗೃತಿ: ಕೊಪ್ಪಳ ನಗರದ ಅಶೋಕ ವೃತ್ತದಿಂದ ಗವಿಸಿದ್ದೇಶ್ವರ ಮಠದ ವರೆಗೆ ನಡೆದ ಕಾಲ್ನಡಿಗೆ ಜಾಥದಲ್ಲಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ತಿಳಿದುಕೊಳ್ಳಿ, ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಿ, ವಾಹನದ ಕನ್ನಡಿಗಳು ನಮ್ಮ ಮೂರನೇಯ ಕಣ್ಣು, ರಸ್ತೆ ತಿರುವುಗಳಲ್ಲಿ ಹಾರ್ನ್‌ ಮಾಡಿ, ವಿಮೆ ಮಾಡಿಸದೇ ವಾಹನ ಬಳಸಬೇಡಿ, ಆಗ ಬಹುದು ವೇಗದ ಚಾಲನೆ ನಿಮ್ಮ ಅಂತಿಮ ಚಾಲನೆ, ‘ವೇಗವನ್ನು ಕೊಲ್ಲಿರಿ, ಮುಗ್ದ ಜೀವಿಗಳು ್ಘ ನಿಮ್ಮ ಜೀವನವನ್ನಲ್ಲ', ‘ಸೀಟ್ ಬೆಲ್ಡ್‌ ಧರಿಸಿ, ಇದುವೇ ಜೀವ, ಇದುವೇ ನಿಮಯ', ‘100 ರಲ್ಲಿ ಹೋಗಬೇಡಿ 108ರಲ್ಲಿ ಬರಬೇಡಿ, ‘ಅಗತ್ಯ ಸಂದರ್ಭದಲ್ಲಿ ವೇಗವನ್ನು ತಗ್ಗಿಸಿ, ಜೀವವನ್ನು ಉಳಿಸಿ', ಸಂಚಾರಿ ಪೊಲೀಸರು ನಿಮ್ಮ ಜೀವ ರಕ್ಷಕರು, ಎಡಬದಿಯಿಂದ ಓರ್‌ಟೆಕ್ ಮಾಡಬೇಡಿ, ಹೀಗೆ ವಿವಿಧ ಜಾಗೃತಿ ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ, ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದರು.