ಅದ್ದೂರಿಯಾಗಿ ರಂಜಾನ್ ಹಬ್ಬವನ್ನು ಆಚರಿಸಿದ ಮುಸ್ಲಿಂ ಬಾಂಧವರು
ಕುಕನೂರು 31: ಪಟ್ಟಣದ ಮುಸ್ಲಿಂ ಬಾಂಧವರು ಹಾಗೂ ಮಕ್ಕಳು ಅತ್ಯಂತ ಸಡಗರ ಸಂಭ್ರಮದಿಂದ ರಂಜಾನ್ ಹಬ್ಬವನ್ನು ಆಚರಿಸಿದರು. ರಂಜಾನ ಹಬ್ಬದಲ್ಲಿ ನಿರಂತರ ಒಂದು ತಿಂಗಳ ಕಾಲ, ಮಕ್ಕಳು, ಮಹಿಳೆಯರು ಕಠಿಣ (ರೋಜಾ) ಉಪವಾಸ ವ್ರತವನ್ನು ಆಚರಣೆ ಮಾಡಿದರು. ಸೋಮವಾರದಂದು ಬೆಳಗ್ಗೆ ಪಟ್ಟಣದ ಮಹಾಮಾಯ ದೇವಸ್ಥಾನದ ತೇರಿನ ಗಡ್ಡಿಯಿಂದ ಮುಸ್ಲಿಂ ಬಾಂಧವರೆಲ್ಲ ಸೇರಿ ಒಡಗೂಡಿ ಅಲ್ಲಾಹನ ನಾಮ ಸ್ಮರಣೆಯೊಂದಿಗೆ ಪಟ್ಟಣದ ವೀರಭದ್ರ್ಪ ವೃತ್ತದ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು.
ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಸಮಾಜ ಬಾಂಧವರಿಗೆ ಶುಭಾಶಯ ಕೋರಲು ಆಗಮಿಸಿದ್ದ ಮಾಜಿ ತಾಲೂಕ ಪಂಚಾಯತಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ರಂಜಾನ್ ಹಬ್ಬ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ ಮುಸ್ಲಿಂ ಬಾಂಧವರೆಲ್ಲ ರಂಜಾನ್ ಒಂದು ತಿಂಗಳ ಕಾಲ ನಿರಂತರವಾಗಿ ನೀರು ಸೇವನೆ ಮಾಡದಂತೆ ಕಠಿಣ ವ್ರತ ಆಚರಣೆ ಮಾಡುವ ಮೂಲಕ ಹಸುವಿನ ಕಠಿಣತೆಯನ್ನು ಅರಿತು, ಬಡವ ಶ್ರೀಮಂತ ಎನ್ನುವ ಭೇದವಿಲ್ಲದೆ ಎಲ್ಲರೂ ಸಮಾನ ಮನಸ್ಕರಾಗಿ ಅಲ್ಲಾಹನ ಪ್ರಾರ್ಥಿಸುವುದು ಹಾಗೂ ಅಂದಿನ ದಿನ ದಾನ ನೀಡುವ ಮೂಲಕ ಹಸಿವೆಯಿಂದ ನಡೆಯುವ ರಂಜಾನ್ ಆಚರಣೆ ಬಡತನದ ಹಸಿವು ಏನೆಂಬುದನ್ನು ತೋರಿಸಿಕೊಡುತ್ತದೆ ಎಂದರು.
ಅದನ್ನು ಅರಿತು ಮುಸ್ಲಿಂ ಬಾಂಧವರು ಬಡವನಿಗೆ ಹಸಿದವನಿಗೆ ದಾನ ಧರ್ಮದ ಮೂಲಕ ರಂಜಾನ್ ಭಾವೈಕ್ಯತೆ ಸಾರುವ ಹಬ್ಬವನ್ನು ಆಚರಣೆ ಮಾಡುತ್ತಾರೆ ಎಂದು ಹೇಳಿದರು.ಈ ವೇಳೆ ಜಾಮಿಯಾ ಮಸ್ಜಿದ್ನ ಧರ್ಮ ಗುರು ಹಾಫಿಜ್ ಸಾಬ್, ರಶೀದ್ ಸಾಬ್ ಮುಬಾರಕ್, ವೀರಯ್ಯ ತೋಂಟದಾರ್ಯಮಠ,ರಂಜಾನ್ ಹಬ್ಬ ಕುರಿತು ಮಾತನಾಡಿದರು. ಈ ವೇಳೆ ಸಮಾಜದ ಮುಖಂಡರಿಗೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮಾಜಿ ಸಚಿವ ಹಾಲಪ್ಪ ಆಚಾರ್ ದೂರವಾಣಿ ಮೂಲಕ ಶುಭಾಶಯ ವಿನಿಮಯ ಮಾಡಿದರು.ಕುಕನೂರು ಪೊಲೀಸ್ ಠಾಣೆಯ ಪಿಎಸ್ಐ ಟಿ. ಗುರುರಾಜ್ ಹಾಗೂ ಸಿಬ್ಬಂದಿಯವರು ಅತ್ಯಂತ ಶಾಂತಿಯುತ ರಂಜಾನ್ ಆಚರಣೆಯಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ನಿರ್ವಹಿಸಿದರು.ಈ ಸಂದರ್ಭದಲ್ಲಿ ಕಾಸಿಂಸಾಬ್ ತಳಕಲ್, ರಶೀದ್ ಹಣಜಗಿರಿ, ನೂರ್ ಅಹ್ಮದ್ ಹಣಜಗಿರಿ, ಸಿರಾಜ್ ಕರಮುಡಿ, ಸಾಧಿಕ್ ಖಾಜಿ, ಮೈಬೂಬ್ ಸಾಬ ಗುಡಿಹಿಂದಲ್, ರೆಹಮಾನ್ ಸಾಬ್ ಮುಕ್ಕಪ್ಪನವರ್, ರಫಿ ಹಿರಿಹಾಳ, ಚಾಂದಸಾಬ ,ಗುಡೂಸಾಬು ಮಕಾಂದಾರ್, ಲಾಲ್ ಭಾಷಾ ಗುಡಿಹಿಂದಲ್, ಮೈನುಸಾಬ ಹಿರೇಹಾಳ ಗೌಸು ಹಿರೇಹಾಳ, ದಸ್ತಗಿರಸಾಬ್ ಗದ್ವಾಲ್, ಮುಸ್ತಪ್ ಕೊಪ್ಪಳ, ತಸ್ಲಿಂ ಡಂಬಳ, ರೆಹಮಾನ್ ಸಾಬ್ ಖಾಜಿ, ಫಿರಸಾಬ ಧಪೇದಾರ್, ಹಜರತ್, ಚಾಂದ್ ಹುಸೇನ್ ಗಾಂಜಿ, ಹುಸೇನ್ ಸಾಬ, ಮೆಹಬೂಬ್ ಐಬಿ ಹಾಗೂ ಮುಸ್ಲಿಂ ಸಮಾಜದ ಗುರುಹಿರಿಯರು ಮಕ್ಕಳು ಇತರರು ಇದ್ದರು.