ಪಂಚ ಗ್ಯಾರಂಟಿ ಯೋಜನೆಗಳ ಜಾಗೃತಿಯ ಸಂಚಾರಿ ವಾಹನಕ್ಕೆ ಸಚಿವರಿಂದ ಚಾಲನೆ

 ಪಂಚ ಗ್ಯಾರಂಟಿ ಯೋಜನೆಗಳ ಜಾಗೃತಿಯ ಸಂಚಾರಿ ವಾಹನಕ್ಕೆ ಸಚಿವರಿಂದ ಚಾಲನೆ  Minister launches awareness vehicle for Pancha Guarantee Schemes

                ಗದಗ  17:  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ಎಲ್‌ಇಡಿ ಸಂಚಾರ ವಾಹನಕ್ಕೆ ಬಿಂಕದಕಟ್ಟಿಯಲ್ಲಿ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಕೆ ಪಾಟೀಲ ಅವರು ಚಾಲನೆ ನೀಡಿದರು.     ರಾಜ್ಯ ಸರಕಾರವು ಸಾಮಾನ್ಯ ಜನರ ಜೀವನಮಟ್ಟ ಸುಧಾರಣೆಗಾಗಿ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಶಕ್ತಿ ಯೋಜನೆ, ಯುವನಿಧಿ, ಗೃಹಜ್ಯೋತಿ, ಅನ್ನಭಾಗ್ಯ ಬಗ್ಗೆ ಎಲ್‌ಇಡಿ ವಾಹನ ಹಾಗೂ ಬೀದಿ ನಾಟಕ ತಂಡಗಳು ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.     ಸರ್ಕಾರದ ಯೋಜನೆಗಳ ಲಾಭ ನೇರವಾಗಿ ಜನರಿಗೆ ತಲುಪಬೇಕೆಂಬ ಉದ್ದೇಶದಿಂದ ಎಲ್‌ಇಡಿ ವಾಹನದ ಮೂಲಕ ಅರಿವು ಮೂಡಿಸಲಾಗುತ್ತದ್ದು, ಅರ್ಹ ಫಲಾನುಭವಿಗಳು ಇದರ ಸದುಪಯೋಗಪಡೆಯುವಂತೆ ಕೋರಲಾಗಿದೆ.     

              ಈ ವಾಹನಗಳು ಜಿಲ್ಲೆಯ ಗದಗ ತಾಲೂಕಿನ ಗ್ರಾಮಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಿದೆ, ಬೀದಿ ನಾಟಕ ತಂಡಗಳು, ದಿನಕ್ಕೆ 2 ರಂತೆ ಬೀದಿ ನಾಟಕಗಳ ಮೂಲಕ ಅರಿವು ಮೂಡಿಸಲಿವೆ, ಅದರಂತೆ ಎಲ್‌ಇಡಿ ಮೂಲಕವು ಜನರಿಗೆ ಯೋಜನೆಗಳ ವನವರಿಕೆ ಮಾಡಲಾಗುತ್ತದೆ.     ಈ ಸಂದರ್ಭದಲ್ಲಿ ಪ್ರಮುಖರಾದ ಆನಂದಸ್ವಾಮಿ ಗಡ್ಡದೆವರಮಠ, ರವಿ ಮೂಲಿಮನಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ  ಸಹಾಯಕ ನಿರ್ದೇಶಕರ ವಸಂತ ಮಡ್ಲೂರ, ಡಾ. ಶರಣು ಗೊಗೇರಿ, ಕೊಟ್ರೇಶ್ ವಿಭೂತಿ, ಕಲಾವಿಧರಾದ ವೀರಣ್ಣ ಅಂಗಡಿ ಹಾಗೂ ಸಂಗಡಿಗರು ಇನ್ನಿತರರು ಉಪಸ್ಥಿತರಿದ್ದರು.