ಪುರುಷರ ಕ್ರಿಕೆಟ್ ಟೂರ‌್ನಮೆಂಟ್‌ಗೆ ಚಾಲನೆ

Men's cricket tournament kicks off

ಪುರುಷರ ಕ್ರಿಕೆಟ್ ಟೂರ‌್ನಮೆಂಟ್‌ಗೆ ಚಾಲನೆ 

ಬಳ್ಳಾರಿ 26: ರಾವ್ ಬಹದ್ದೂರ್ ವೈ ಮಹಾಬಲೇಶ್ವರ​‍್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಶ್ವೇಶ್ವರಾಯ  ತಾಂತ್ರಿಕ ವಿಶ್ವವಿದ್ಯಾಲಯದ  ಕಲಬುರ್ಗಿ ವಲಯದ  ಪುರುಷರ ಕ್ರಿಕೆಟ್ ಟೂರ‌್ನಮೆಂಟ್‌ಗೆ ಚಾಲನೆ ಪತ್ರಿಕಾ ಪ್ರಕಟನೆ ಕೃಪೆಗಾಗಿ  

ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರ​‍್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ 26 ರಂದು ವಿಶ್ವೇಶ್ವರಾಯ  ತಾಂತ್ರಿಕ ವಿಶ್ವವಿದ್ಯಾಲಯದ  ಕಲಬುರ್ಗಿ ವಲಯದ  ಪುರುಷರ ಕ್ರಿಕೆಟ್ ಟೂರ‌್ನಮೆಂಟ್‌ಯನ್ನು, ಪ್ರಾಂಶುಪಾಲರು ಡಾ. ಟಿ.ಹನುಮಂತ ರೆಡ್ಡಿ,  ಮಹಾವಿದ್ಯಾಲಯ ಧೈಹಿಕ ಶಿಕ್ಷಕ ನಿರ್ದೇಶಕ ವಿಜಯಮಹಂತೇಶ, ಇನ್ನಿತರರು ಕೆ.ಎಸ್‌.ಮಂಜುನಾಥ, ಸುನಿಲ್ ಕುಮಾರ್, ಪ್ರವೀಣ್, ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

 ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಒಳ್ಳೆಯ ಮನೋಭಾವನೆಯಿಂದ ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಗೆಲುವಿಗಾಗಿ ಪ್ರಯತ್ನಿಸಬೇಕು. ಆಟದಲ್ಲಿ ಸೋಲು ಗೆಲುವು ಸಾಮಾನ್ಯ, ಆದರೆ, ಸೋಲೇ ಗೆಲುವಿಗೆ ಮುಖ್ಯ ಮೆಟ್ಟಿಲು ಎಂಬುದನ್ನು ಮರೆಯಬಾರದು. ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ ಬೆಳಗಾವಿ ಅಧಿಕಾರಿಗಳಿಗೆ ಈ ಕ್ರಿಕೆಟ್ ಟೂರ‌್ನಮೆಂಟ್‌ಗೆ ನಮ್ಮ ಮಹಾವಿದ್ಯಾಲಯವನು ಆಯ್ಕೆ ಮಾಡಿದುದ್ದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು. ಆರಂಭದ ಮ್ಯಾಚು ಬಿಕೆ.ಐ.ಟಿ,ಭಾಲ್ಕಿ ಇಂಜಿನಿಯರಿಂಗ್ ಕಾಲೇಜು ಮತ್ತು ಪಿಡಿಐಟಿ ಕಾಲೇಜ್ ಆಫ್ ಇಂಜಿನಿಯರಿಂಗ್,ಹೊಸಪೇಟೆ, ನಡುವೆ ಜರುಗಿತು, ಭೋಧಕ, ಭೋಧಕೇತರರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿವೃಂದದವರೂ ಭಾಗವಹಿಸಿದ್ದರು.