ಮಹಿಳೆಗೆ ಬಲತ್ಕಾರ ಮಾಡಿದವನಿಗೆ 10 ವರ್ಷ ಸದಾ ಸಜೆ ಹಾಗೂ 15 ಸಾವಿರ ರೂ.ದಂಡ
Man who raped woman gets 10 years in prison and fined Rs. 15,000
ಕಾರವಾರ 12: ಮಾಡಿದ ಆರೋಪ ಹೊತ್ತಿದ್ದ ಜೊಯಿಡಾ ತಾಲೂಕಿನ ನಿವಾಸಿ ಉಲ್ಲಾಸ ಸಡಕೋ ಗಾವಡಾ ಎಂಬಾತನಿಗೆ ಹತ್ತು ವರ್ಷ ಕಾರಾಗೃಹವಾಸದ ಸದಾ ಸಜೆ ಹಾಗೂ 15 ಸಾವಿರ ರೂ.ದಂಡ ವಿಧಿಸಿ , ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಶುಕ್ರವಾರ ತೀಪು ಪ್ರಕಟಿಸಿದರು. ಜೊಯಿಡಾ ತಾಲ್ಲೂಕಿನ ಅಣಶಿ ಸನಿಹ ಕರ್ಲವಾಡದ ಹುಲಿ ಸಂರಕ್ಷತ ಪ್ರದೇಶದಲ್ಲಿ ಮಹಿಳೆ ದನ ಮೇಯಿಸುತ್ತಿದ್ದಾಗ ,ಉಲ್ಲಾಸ ಸಡಕೊ ಗಾವಡಾ ಎಂಬಾತ ದನ ಮೇಯಿಸುವ ಮಹಿಳೆಗೆ ಬಲತ್ಕಾರದಿಂದ ಹಠ ಸಂಭೋಗ ಮಾಡಿ, ಸಾಕ್ಷ್ಯ ನಾಶ ಮಾಡಿದ್ದ. 1 ಡಿಸೆಂಬರ್ 2018 ರಲ್ಲಿ ಈ ಘಟನೆ ನಡೆದಿತ್ತು. ಜೊಯಿಡಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು .
ಕಾನ್ಸಟೆಬಲ್ ಗಳಾದ ಲಿಯಾಕತ ಅಲಿ, ಖಲೀಲ್ ಮುಲ್ಲಾ ಸಾಕ್ಷ್ಯ ಸಂಗ್ರಹಿಸಿದ್ದರು.ಸಿಪಿಐ ರಮೇಶ್ ಹೂಗಾರ ಕೋರ್ಟಗೆ ಚಾರ್ಜಶೀಟ್ ಸಲ್ಲಿಸಿದ್ದರು. ಸಾಕ್ಷ್ಯ ಅಧರಿಸಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಮಳಗೀಕರ್ ಸಮರ್ಥವಾಗಿ ವಾದ ಮಂಡಿಸಿದ್ದರು. ಶಿರಸಿಯ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ್ ಕಿಣಿ ಸಾಕ್ಷಾಧಾರ ಹಾಗೂ ವಾದ ಆಲಿಸಿ, ತೀಪು ಪ್ರಕಟಿಸಿದರು. ಅಪರಾಧಿ ಉಲ್ಲಾಸ ಸಡಕೊ ಗಾವಡಾಗೆ ಹತ್ತು ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ 15 ಸಾವಿರ ದಂಡ ವಿಧಿಸಿದರು. ಅಲ್ಲದೆ ಸಂತ್ರಸ್ತೆಗೆ 10 ಸಾವಿರ ರೂ. ಪರಿಹಾರ ನೀಡುವಂತೆ ತೀಪು ಪ್ರಕಟಿಸಿದರು. ಕಾನೂನು ಸೇವಾ ಪ್ರಾಧಿಕಾರದಿಂದ ಸಂತ್ರಸ್ತೆಗೆ ಅಗತ್ಯ ನೆರವು ಪಡೆಯಬಹುದು ಎಂದು ಆದೇಶಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 