ಕಾಡು ಪ್ರಾಣಿಯ ಮಾಂಸ ಸಾಗಾಟ: ವ್ಯಕ್ತಿ ಬಂಧನ

ಕಾಡು ಪ್ರಾಣಿಯ ಮಾಂಸ ಸಾಗಾಟ: ವ್ಯಕ್ತಿ ಬಂಧನ Man arrested for transporting wild animal meat

ದಾಂಡೇಲಿ 23: ದಾಂಡೇಲಿಯಲ್ಲಿ ಕಾಡು ಪ್ರಾಣಿಯ ಮಾಂಸವನ್ನು ದ್ವಿ ಚಕ್ರ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಮಾಲು ಸಮೇತ ಅರಣ್ಯ ಇಲಾಖೆಯ ಸಿಬ್ಬಂದಿಗಳು ವಶಕ್ಕೆ ಪಡೆದ ಘಟನೆ ಗುರುವಾರ ಜರುಗಿದೆ.  

ನಗರದ ಬರ್ಚಿ ರಸ್ತೆಯಲ್ಲಿರುವ ಪೋಲಿಸ್ ವಸತಿ ಗೃಹದ ಹತ್ತಿರ ದ್ವಿ ಚಕ್ರ ವಾಹನದಲ್ಲಿ ಸಾಗುತ್ತಿದ್ದ ಕೇರವಾಡದ ರಾಜು ಮಂಜು ಪೋತದಾರ ಎಂಬಾತನ ವಾಹನವನ್ನು ತಡೆದು ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಪರೀಶೀಲಿಸಿದಾಗ  ಮಾಂಸ ಸಮೇತ ಸಿಕ್ಕಿ ಬಿದ್ದಿದ್ದಾನೆ. ತಕ್ಷಣವೇ ಮಾಲು ಸಮೇತ ದ್ವಿ ಚಕ್ರವಾಹನವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.  

ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ  ಹಳಿಯಾಳ ಉಪ ಅರಣ್ಯ  ಸಂರಕ್ಷಣಾಧಿಕಾರಿ ಅವರ ಮಾರ್ಗದರ್ಶನದಲ್ಲಿ ವಲಯಾರಣ್ಯಾಧಿಕಾರಿ ಎನ್ ಎಲ್ ನಧಾಫ ಅವರ  ತಂಡ ಕಾರ್ಯಾಚರಣೆ ನಡೆಸಿದರು.