ಶಿಕ್ಷಣ ಸಂಸ್ಥೆಯಲ್ಲಿ ಮಕರ ಸಂಕ್ರಾಂತಿಯ ಹಬ್ಬ ಆಚರಣೆ

ಶಿಕ್ಷಣ ಸಂಸ್ಥೆಯಲ್ಲಿ  ಮಕರ ಸಂಕ್ರಾಂತಿಯ ಹಬ್ಬ  ಆಚರಣೆ Makar Sankranti festival celebrated in educational institution

ತಾಳಿಕೋಟೆ  16:  ಪಟ್ಟಣದ   ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು    ಆಚರಿಸಲಾಯಿತು.  ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ.ಎಸ್‌.ಎಂ.ಸಜ್ಜನ ಅವರು ಮಾತನಾಡಿ  ಸಂಕ್ರಾಂತಿ ಎಂದರೆ “ಸಂ ಕ್ರಾಂತಿ” ಪ್ರತಿಯೊಬ್ಬ ವ್ಯಕ್ತಿಯ ಬಾಳಿನಲ್ಲಿ ಹೊಸತನ ಮೂಡಿಸುವ ಹಾಗೂ ವರ್ಷದ ಮೊದಲ ಹಬ್ಬವಾಗಿದೆ ಮೂಖ್ಯವಾಗಿ ಜಾನುವಾರುಗಳ ಹಬ್ಬಎಂದು ಸಂಪ್ರದಾಯದಲ್ಲಿ ರೂಢಿಘತವಾಗಿ ಬಂದಿದೆ. ಎಲ್ಲರೂ ಎಳ್ಳು ಬೆಲ್ಲ ತಿಂದು ಸಿಹಿಯಾದ ಮಾತುಗಳನ್ನು ಆಡುತ್ತಾ  ಹಬ್ಬವನ್ನುಸಡಗರ ಸಂಭ್ರಮದಿಂದ ಆಚರಣೆಮಾಡಿ ನಮ್ಮ ಸನಾತನ ಧರ್ಮದ ಸಂಪ್ರದಾಯವನ್ನು  ಮುಂದುವರಿಸಿಕೊಂಡು ಹೋಗಬೇಕು.ಎಂದು ಹಬ್ಬದ ಮಹತ್ವವನ್ನು ಎಲ್ಲರಿಗೂ ತಿಳಿಸಿದರು.    ಈ ಸಮಯದಲ್ಲಿ ಸಂಸ್ಥೆಯ ಕಾಯದರ್ಶಿಗಳಾದ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಿ.ಜಿ.ಸಜ್ಜನ, ಶ್ರೀಮತಿ ಆರ್‌.ಎಸ್‌.ದೇಸಾಯಿ, ದೈಹಿಕ ಶಿಕ್ಷಕ ಶಿವಾನಂದ ಸುಣಧೋಳಿ, ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯ ಶ್ರೀ ಟಿ.ವ್ಹಿ ಶೆಟ್ಟಿ, ಶ್ರೀಮತಿ ಜಿ.ಎನ್‌.ಪಾಟೀಲ, ಸರ್ವ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು.ಉಪಸ್ಥಿತರಿದ್ದರು. ನಿರೂಪಣೆ ಶ್ರೀಮತಿ ಅಮೃತ ಬೆನಾಳಮಠ ಹಾಗೂ   ಕಲ್ಮೇಶ ಸರ್ ನಡೆಸಿಕೊಟ್ಟರು