ತಾಂತ್ರಿಕ ಸಮಸ್ಯೆಯಿಂದ ಮೆಕ್ಕೆಜೋಳ ಖರೀದಿ ಸ್ಥಗಿತ: ಸಂಕಷ್ಟದಲ್ಲಿ ಅನ್ನದಾತ
Maize procurement halted due to technical issues: Food supplier in distress
ಶಿರಹಟ್ಟಿ 17: ತಾಲೂಕಿನ ರೈತರಿಗೆ ಅನುಕೂಲವಾಗುವಂತೆ ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಿದೆಯಾದರೂ, ಸದ್ಯ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಬೆಂಬಲ ಬೆಲೆಯ ಆಸೆಯಲ್ಲಿ ಸಾವಿರಾರು ರೈತರು ದಾಖಲೆ ಹಿಡಿದು ಕಾಯುತ್ತಿದ್ದಾರೆ.
ತಾಲೂಕಿನಲ್ಲಿ ಈವರೆಗೆ ಟಿಎಪಿಸಿಎಂಎಸ್ ಮೂಲಕ 216 ಕ್ವಿಂಟಾಲ್ ಮತ್ತು ಕೆಎಂಎಫ್ ಮೂಲಕ 71 ಕ್ವಿಂಟಾಲ್ ಸೇರಿ ಒಟ್ಟು 287 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಗೆ ನೋಂದಣಿಯಾಗಿದೆ. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಲಾಗಿನ್ ವ್ಯವಸ್ಥೆ ಸ್ಥಗಿತಗೊಂಡಿರುವುದರಿಂದ ಸುಮಾರು 1,000ಕ್ಕೂ ಹೆಚ್ಚು ರೈತರ ನೋಂದಣಿ ಬಾಕಿ ಉಳಿದಿದೆ. ಕೇವಲ 16 ರೈತರಿಂದ 533 ಕ್ವಿಂಟಾಲ್ ಖರೀದಿಯಾದ ನಂತರ ಪ್ರಕ್ರಿಯೆ ನಿಂತಿರುವುದು ರೈತರನ್ನು ಖರೀದಿ ಕೇಂದ್ರದತ್ತ ಅಲೆದಾಡುವಂತೆ ಮಾಡಿದೆ.
ನೋಂದಣಿ ಪುನರಾರಂಭಿಸಲು ಸ್ಥಳೀಯ ಅಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ಸತತ ಪ್ರಯತ್ನ ನಡೆಸುತ್ತಿದ್ದಾರೆ. ಲಾಗಿನ್ ಮುಕ್ತವಾದ ತಕ್ಷಣ ಬಾಕಿ ಇರುವ ರೈತರ ನೋಂದಣಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ರೈತರ ಆಕ್ರೋಶ: ಸಾಲ ತೀರಿಸಲು ಮೆಕ್ಕೆಜೋಳ ಮಾರಾಟ ಮಾಡಬೇಕು. ಬೆಂಬಲ ಬೆಲೆ ಸಿಗುತ್ತೆ ಅಂತ ಇಲ್ಲಿಗೆ ಬಂದರೆ ವಾರದಿಂದ ಸರ್ವರ್ ಬರ್ತಿಲ್ಲ ಅಂತ ಹೇಳ್ತಿದ್ದಾರೆ. ನಮಗಾಗುತ್ತಿರುವ ತೊಂದರೆ ಯಾರಿಗೆ ಹೇಳಬೇಕು?" ಹಿ ಮೆಕ್ಕೆಜೋಳ ಬೆಳೆದ ರೈತರು. ಖಾಸಗಿ ಮಾರುಕಟ್ಟೆಯಲ್ಲಿ ದರ ಕಡಿಮೆ ಇದೆ. ಸರ್ಕಾರಿ ಕೇಂದ್ರ ನಂಬಿ ಕಾದು ಕುಳಿತರೆ ಇಲ್ಲಿ ನೋಂದಣಿಯೇ ಆಗುತ್ತಿಲ್ಲ. ನಿತ್ಯವೂ ಕೇಂದ್ರಕ್ಕೆ ಬಂದು ಹೋಗಿ ಸುಸ್ತಾಗಿದ್ದೇವೆ." ಹಿ ಸಂಕಷ್ಟದಲ್ಲಿರುವ ಅನ್ನದಾತ. ಕೂಡಲೇ ಲಾಗಿನ್ ಸಮಸ್ಯೆ ಸರಿಪಡಿಸಿ, ತಾಲೂಕಿನ ಪ್ರತಿಯೊಬ್ಬ ರೈತರ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಸರ್ಕಾರ ಸಕಲ ವ್ಯವಸ್ಥೆ ಮಾಡಬೇಕು ಎಂಬುದು ಶಿರಹಟ್ಟಿ ಭಾಗದ ರೈತರ ಒಕ್ಕೊರಳ ಆಗ್ರಹವಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 