ಮಹೇಶ ಕುಮಟಳ್ಳಿ ಹತಾಶೆರಾಗಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ: ಶಾಸಕ ರಾಜು ಕಾಗೆ
Mahesh Kumatalli is disappointed. There is no substance in his allegations: MLA Raju Kage
ಕಾಗವಾಡ: ಕೃಷ್ಣಾ ಸಕ್ಕರೆ ಕಾರ್ಖಾನೆಯ ಮತದಾನದ ವೇಳೆ ಯಾವುದೇ ರೀತಿ ಅಕ್ರಮ ನಡೆದಿಲ್ಲ. ಮಹೇಶ ಕುಮಟಳ್ಳಿ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಅವರು ಹತಾಶೆ ಭಾವನೆಯಿಂದ ಹೇಳಿಕೆ ನೀಡಿದ್ದಾರೆಂದು ಶಾಸಕ ರಾಜು ಕಾಗೆ ಹೇಳಿದ್ದಾರೆ. ಅವರು ಸೋಮವಾರ ದಿ. 27 ರಂದು ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ಸಲ್ಲಿಸಿ, ಮಾತನಾಡುತ್ತಿದ್ದರು. ಕೃಷ್ಣಾ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ನಮ್ಮ ಬಣದ 13 ಸದಸ್ಯರು ಆಯ್ಕೆಗೊಂಡಿದ್ದು, ನಮ್ಮ ಮೇಲೆ ವಿಶ್ವಾಸವಿಟ್ಟು ಮತ್ತೋಮ್ಮೆ ನಮಗೆ ಅಧಿಕಾರ ನಡಸಲು ಅನುಕೂಲ ಮಾಡಿಕೊಟ್ಟ ಎಲ್ಲ ರೈತ ಮತದಾರರಿಗೆ ಧನ್ಯವಾದ ತಿಳಿಸಿಸುತ್ತೇನೆ ಎಂದರು. ಶಾಸಕ ಲಕ್ಷ್ಮಣ ಸವದಿ ಮತ್ತು ನಾನು ಸೇರಿ ಸಂಘಟಿತ ಪ್ರಯತ್ನದಿಂದಾಗಿ ಮತ್ತು ಕಳೆದ 20 ವರ್ಷಗಳಿಂದ ಕೃಷ್ಣಾ ಸಕ್ಕರೆ ಕಾರ್ಖಾನೆಯಲ್ಲಿ ಪಾರದರ್ಶಕ ಆಡಳಿತ ನೀಡಿರುವ ಪರಿಣಾಮ ರೈತ ಸದಸ್ಯರು ನಮ್ಮನ್ನು ಮತ್ತೊಮ್ಮೆ ಆಯ್ಕೆ ಮಾಡಿದ್ದಾರೆ.
ರೈತ ಸದಸ್ಯರ ವಿಶ್ವಾಸಕ್ಕೆ ದಕ್ಕೆ ಬಾರದಂತೆ ಮುಂದಿನ ದಿನಗಳಲ್ಲಿ ಕಾರ್ಖಾನೆಯ ಪ್ರಗತಿಗೆ ಶ್ರಮಿಸುವುದಾಗಿ ತಿಳಿಸಿದರು. ಕಾಗವಾಡ ಪಟ್ಟಣದಲ್ಲಿ ಒಟ್ಟು ಮೂರು ಸಮುದಾಯ ಭವನಗಳ ನಿರ್ಮಾಣ ಮತ್ತು ರಸ್ತೆ ಅಭಿವೃದ್ಧಿಗೆ ಇಂದು ಚಾಲನೆ ನೀಡಲಾಗಿದ್ದು, ಪಟ್ಟಣದ ಮತ್ತು ಕ್ಷೇತ್ರದ ಅಭಿವೃದ್ಧಿಗೆ ತಾವು ಸದಾ ಕ್ರಿಯಾಶೀಲರಾಗಿ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಪಡಿಸಲಾಗುವುದು ಎಂದರು. ಈ ವೇಳೆ ಮುಖಂಡರಾದ ರಮೇಶ ಚೌಗಲಾ, ಕಾಕಾ ಪಾಟೀಲ, ಪದ್ಮಾಕರ ಕರವ, ವಿನಾಯಕ ಚೌಗಲಾ, ಜ್ಯೋತಿಕುಮಾರ ಪಾಟೀಲ, ಶಾಂತಿನಾಥ ಕರವ, ಗುತ್ತಿಗೆದಾರರಾದ ಸೋಮರಾಜ ಪಾಟೀಲ, ಆದಿತ್ಯ ಭಿಂಗೆ, ವೃಷಭ ಪಾಟೀಲ, ಅಮರೇಶ ಕೋಳಿ, ಅವಿನಾಶ ದೇವಣೆ, ಮಹಾಂತೇಶ ಬಡಿಗೇರ, ಸುಧೀರ ಕರವ, ಉದಯ ಖೋಡೆ, ಅಶೋಕ ಪೂಜೇರಿ, ಮಹೇಶ ಪೂಜೇರಿ, ಜನಾರ್ಧನ ಧೊಂಡಾರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 