ಮಹಾರಾಣಾ ಪ್ರತಾಪ್ ದೇಶ ಕಂಡ ಅಪ್ರತಿಮ ವೀರ : ವಿಜಯಸಿಂಗ್
Maharana Pratap was an unparalleled hero the country has ever seen: Vijay Singh
ತಾಳಿಕೋಟಿ 20: ಮಹಾರಾಣಾ ಪ್ರತಾಪ್ ಸಿಂಹ ಅವರು ಮಾತೃಭೂಮಿಯ ರಕ್ಷಣೆಗಾಗಿ ತನ್ನ ಸರ್ವವನ್ನೂ ತ್ಯಾಗ ಮಾಡಿದ ಮಹಾನ್ ನಾಯಕ,ಅವರ ದೇಶಪ್ರೇಮ ಹಾಗೂ ತ್ಯಾಗದ ಜೀವನ ನಮಗೆಲ್ಲರಿಗೂ ಮಾದರಿಯಾಗಿದೆ ಎಂದು ಯುವ ಮುಖಂಡ ವಿಜಯಸಿಂಗ್ ಹಜೇರಿ ಹೇಳಿದರು. ಸೋಮವಾರ ಪಟ್ಟಣದ ಮಹಾರಾಣಾ ಪ್ರತಾಪ್ ಸಿಂಹ ವೃತ್ತದಲ್ಲಿ ರಾಣಾ ಪ್ರತಾಪರ ಹುತಾತ್ಮ ಸ್ಮರಣಾರ್ಥ ರಜಪೂತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಜ್ಯೋತಿ ಬೆಳಗಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತದ ಇತಿಹಾಸದಲ್ಲಿ ಮಹಾರಾಣಾ ಪ್ರತಾಪ ರಂಥಹ ಶೌರ್ಯ ಹಾಗೂ ಪರಾಕ್ರಮದ ಬೇರೋಬ್ಬ ಅರಸ ನಮಗೆ ಸಿಗುವುದಿಲ್ಲ. ಅವರ ಸ್ವಾಭಿಮಾನದ ಬದುಕು ಭಾರತೀಯರ ಪಾಲಿಗೆ ಸ್ಪೂರ್ತಿಯಾಗಿದೆ ಎಂದರು.
ರಾಜು ರಜಪೂತ ಮಹಾರಾಣಾ ಪ್ರತಾಪ ಸಿಂಹ ಅವರ ಜೀವನ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.ಈ ಸಮಯದಲ್ಲಿ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ,ಉಪಾಧ್ಯಕ ರತನಸಿಂಗ್ ಕೊಕಟನೂರ, ಪ್ರಮುಖರಾದ ನಿವೃತ್ತ ಯೋಧ ಶ್ರೀಪಾಲ್ ಸಂಗಮಿ, ಜಿ.ಜಿ.ಮದರಕಲ್ಲ,ಎಂ.ಕೆ. ಪಟ್ಟಣಶೆಟ್ಟಿ, ಭರತಸಿಂಗ್ ವಿಜಾಪುರ, ಮುದುಕಪ್ಪ ಬಡಿಗೇರ, ರಾಘು ಚೌಹಾಣ, ಗೋವಿಂದಸಿಂಗ್ ಗೌಡಗೇರಿ, ಸುರೇಶ್ ಹಜೇರಿ, ಬಾಲಾಜಿಸಿಂಗ್ ವಿಜಾಪುರ, ಗೋವಿಂದಸಿಂಗ್ ಮೂಲಿಮನಿ, ದೀಲೀಪ ಹಜೇರಿ,ವಿಠ್ಠಲ್ ಹಜೇರಿ, ಪ್ರಹ್ಲಾದ್ ಹಜೇರಿ, ಕೇಸರಸಿಂಗ್ ದೇವಿ, ಪಿಂಟು ಹಜೇರಿ, ಸೂರಜ ಹಜೇರಿ, ಆನಂದ ಹಜೇರಿ, ಬಾಲಾಜಿ ಬಾಯ್ಸ್ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 