ಆನೆಗೆ ಮದವೇರಿ ಸಹಾಯಕ ಮಾವುತನನ್ನೆ ದಾರುಣವಾಗಿ ಕೊಂದ ಘಟನೆ
Madaveri's helper Mavuthan was brutally killed by an elephant
ಆನೆಗೆ ಮದವೇರಿ ಸಹಾಯಕ ಮಾವುತನನ್ನೆ ದಾರುಣವಾಗಿ ಕೊಂದ ಘಟನೆ
ಹಾರೂಗೇರಿ 23 : ಆನೆಗೆ ಮದವೇರಿ ಸಹಾಯಕ ಮಾವುತನನ್ನೆ ದಾರುಣವಾಗಿ ಕೊಂದ ಘಟನೆ ರಾಯಬಾಗ ತಾಲೂಕಿನ ಸುಕ್ಷೇತ್ರ ಅಲಖನೂರಿನ ಕರೆಸಿದ್ದೇಶ್ವರ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.
ಅಥಣಿ ತಾಲೂಕಿನ ಭರಮಕೋಡಿಯ ಕರೆಪ್ಪ ಸಖಾರಾಮ ಬೇವನೂರ (28) ಮೃತ ವ್ಯಕ್ತಿ. ಕಳೆದ ಎಂಟು ವರ್ಷಗಳಿಂದ ಅಲಖನೂರ ಗ್ರಾಮದ ಕರೆಸಿದ್ದೇಶ್ವರ ದೇವಸ್ಥಾನದಲ್ಲಿರುವ ದ್ರುವ (ಗಂಡು ಆನೆ) ಆನೆಗೆ (ಮಾವುತನಿಗೆ ಸಹಾಯಕ) ಕವಾಡಿಗನಾಗಿ ಕೆಲಸ ನಿರ್ವಹಿಸುತ್ತಿದ್ದನು. ಸೋಮವಾರ ಬೆಳಿಗ್ಗೆ ಆನೆಗೆ ಆಹಾರ, ಸ್ವಚ್ಛತೆ ಕೆಲಸದಲ್ಲಿ ನಿರತನಾಗಿದ್ದ ವೇಳೆ, ಆನೆಗೆ ಮದವೇರಿ ಸೊಂಡಿಲಿನಿಂದ ಹೊಡೆದು, ಕಾಲಿನಿಂದ ತುಳಿದು ಸಾಯಿಸಿದೆ. ಮೃತ ಕರೆಪ್ಪ ಬೇವನೂರ ಪತ್ನಿಗೆ ಕಳೆದ 10 ದಿನಗಳ ಹಿಂದೆ ಹೆರಿಗೆಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾಳೆಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪಿಎಸ್ಐ ಮಾಳಪ್ಪ ಪೂಜಾರಿ ಭೇಟಿ ನೀಡಿ ಪರೀಶೀಲಿಸಿದರು. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 